Posts Slider

Karnataka Voice

Latest Kannada News

ಶಿಗ್ಗಾಂವಿಗೆ ಸಂಕಲ್ಪ ಶೆಟ್ಟರ್- ಬಿಜೆಪಿಯಲ್ಲಿ ಹೊಸ ಗೇಮ್ ಪ್ಲಾನ್…!!!

1 min read
Spread the love

ಹುಬ್ಬಳ್ಳಿ: ರಾಜಕೀಯ ವಿಭಿನ್ನವಾಗಿ ಇರುತ್ತದೆ ಎಂಬುದಕ್ಕೆ‌ ಸಾಕ್ಷಿಯಾಗಿ ಹೊಸದೊಂದು ಮಾಹಿತಿ ವೈರಲ್ ಆಗುತ್ತಿದ್ದು, ಅಚ್ಚರಿಯನ್ನ ಸೃಷ್ಟಿ ಮಾಡುತ್ತಿದೆ.

ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಕೆಲವೇ ನಿಮಿಷಗಳಲ್ಲಿ, ‘ನಾನು ಅವರ ಸಂಪುಟದಲ್ಲಿ ಸಚಿವನಾಗಲಾರೆ’ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಅವರಿಂದ ತೆರವಾದ ಸ್ಥಾನಕ್ಕೆ ಜಗದೀಶ ಶೆಟ್ಟರ್ ಪುತ್ರನ ಹೆಸರು ಹರಿದಾಡುತ್ತಿದೆ.

ವೈರಲ್ ಆಗುತ್ತಿರುವ ಮಾಹಿತಿ ಇಲ್ಲಿದೆ ನೋಡಿ…

*ಶಿಗ್ಗಾವಿಗೆ – ಸರಳ ಸಜ್ಜನಿಕೆಯ ಯುವ ನಾಯಕರದ ಶ್ರೀ ಸಂಕಲ್ಪ ಶೆಟ್ಟರ್*

ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿರುವ ಯುವ ನಾಯಕರಾದ ಶ್ರೀ ಸಂಕಲ್ಪ ಶೆಟ್ಟರ್ ಅವರು ಸದಾ ಬಡವರ ಪರ ಶ್ರಮಿಕ ವರ್ಗದವರ ಪರ ಎಸ್ ಎಸ್ ಶೆಟ್ಟರ್ ಫೌಂಡೇಶನ್ ಮುಖಾಂತರ ಜನಸೇವೆಯಲ್ಲಿ ತೊಡಗಿಕೊಂಡಂತವರು.

ಕಳೆದ ಬಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಯುವ ನೀತಿ ಆಯೋಗದ ಸದಸ್ಯರಾಗಿ ಸರ್ಕಾರಕ್ಕೆ ಯುವಜನರ ಆಶೋತ್ತರಗಳನ್ನು ತಿಳಿಸುವಂತಹ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಂತವರು.

ಸಮಾಜ ಸೇವ ಕಾರ್ಯಗಳೊಂದಿಗೆ ಪಕ್ಷ ಸಂಘಟನೆಯ ಕಾರ್ಯಗಳನ್ನು ತೊಡಗಿಕೊಂಡು ಯುವ ಸಮೂಹದ ನಾಯಕರಾಗ ಇಡೀ ಕರ್ನಾಟಕದಲ್ಲಿ ಗುರುತಿಸಿಕೊಂಡಂತವರು.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅತಿ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸಲು ಕಾರಣಿ ಭೂತರಾದವರಲ್ಲಿ ಒಬ್ಬರಾಗಿ ಯಶಸ್ವಿಯಾಗಿ ಕಾರ್ಯವನ್ನು ನಿರ್ವಹಿಸಿದಂತವರು.

ತಮ್ಮ ಸರಳತೆ ಹಾಗೂ ಸಮಾಜದ ಬಗ್ಗೆ ಇರುವಂತಹ ಕಾಳಜಿಯಿಂದ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಂತಹ ಶ್ರೀ ಸಂಕಲ್ಪ ಶೆಟ್ಟರ್ ಅವರಿಗೆ ಈ ಬಾರಿ ನೆಚ್ಚಿನ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಜಿ ಅವರಿಂದ ತೆರವಾದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದಲ್ಲಿ ಗೆಲುವು ಶತಸಿದ್ಧ. ಹಿರಿಯರಿಗೆ ಗೌರವ ತೋರುವ, ಯುವಕರ ಧ್ವನಿಯಾಗಿ ಕಾರ್ಯನಿರ್ವಹಿಸುವ ಉತ್ಸಾಹಿ ನಾಯಕರದ ಶ್ರೀ ಸಂಕಲ್ಪ ಶೆಟ್ಟರ್ ಅವರಿಗೆ ಈ ಬಾರಿ ಶಿಗ್ಗಾವಿ ವಿಧಾನಸಭಾ ಟಿಕೆಟ್ ನೀಡಬೇಕು ಎನ್ನುವುದು ಹಿಡಿಯುವ ಸಮೂಹದ ಬೇಡಿಕೆ.

*ಶಿಗ್ಗಾವಿಗೆ ಸಂಕಲ್ಪ ಶೆಟ್ಟರ್*
*SankalpShettarforShiggaon*


Spread the love

Leave a Reply

Your email address will not be published. Required fields are marked *

You may have missed