Posts Slider

Karnataka Voice

Latest Kannada News

ಧಾರವಾಡದ ನಿವೃತ್ತ DDPI ವಿ.ಎಂ.ಪಾಟೀಲ ಇನ್ನಿಲ್ಲ- ಇಂದು ಅಂತ್ಯಕ್ರಿಯೆ…

Spread the love

ಧಾರವಾಡ: ನಗರದ ಭೋವಿ ಗಲ್ಲಿ ನಿವಾಸಿ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾಗಿದ್ದ ವಿರುಪಾಕ್ಷಗೌಡ.ಎಂ.ಪಾಟೀಲ (74) ಅವರು ಇಂದು ಮಂಗಳವಾರ ಜೂನ 18 ರಂದು ಬೆಳಗಿನ 3.30 ಕ್ಕೆ ಇಹಲೋಕ ತ್ಯಜಿಸಿದರು.
ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3.30 ಕ್ಕೆ ನೆರವೇರಲಿದೆ.
ಮೃತರಿಗೆ ಒಬ್ಬ ಮಗ ಇಬ್ಬರು ಹೆಣ್ಣು ಮಕ್ಕಳಿದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


ಇವರು ಹುಬ್ಬಳ್ಳಿ ಧಾರವಾಡ ನಗರ ವಲಯ, ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಗ್ರಾಮೀಣ ಕ್ಷೇತ್ರದ ಶಿಕ್ಷಣಾಧಿಕಾರಿಯಾಗಿ, ಡೈಟ್ ಪ್ರಾಂಶುಪಾಲರಾಗಿ, ಧಾರವಾಡ ಜಿಲ್ಲೆಯ ಉಪನಿರ್ದೇಶಕ, ಬೆಳಗಾವಿ ಡೈಟ್ ಹಾಗು ಬೆಳಗಾವಿ ಜಿಲ್ಲೆಯ ಉಪನಿರ್ದೇಶಕರಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ವಿ.ಎಂ.ಪಾಟೀಲ ಅವರು ಡಿಡಿಪಿಐ ಆಗಿದ್ದ ಸಮಯದಲ್ಲಿ ಸಾಕಷ್ಟು ಬದಲಾವಣೆ ತರಲು ನಿರಂತರವಾಗಿ ಪ್ರಯತ್ನಿಸಿದ್ದರು.


Spread the love

Leave a Reply

Your email address will not be published. Required fields are marked *