“ಕೋರ್ಟ್ ಮೆಟ್ಟಿಲೇರಿದ” ಗರಗ ಮಠದ ಉತ್ತರಾಧಿಕಾರಿ- Exclusive Story…!!!

ಧಾರವಾಡ: ಗರಗದ ಶ್ರೀ ಮಡಿವಾಳೇಶ್ವರ ಮಠದ ವಿವಾದ ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ. ಉತ್ತರಾಧಿಕಾರಿಯಾಗಿದ್ದ ಶ್ರೀ ಮಠದ ಮಹಾಸ್ವಾಮಿಗಳು ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಹೊಸದೊಂದು ಅಂಕಣ ಆರಂಭವಾಗಿದೆ.
ಗರಗದ ಶ್ರೀ ಮಡಿವಾಳೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿ ಬಂದಿದ್ದ ಪ್ರಶಾಂತ ದೇವರು, ಶ್ರೀ ಮ.ನಿ.ಪ್ರ ಚೆನ್ನಬಸವ ಸ್ವಾಮಿಗಳು, ಕೋರ್ಟ ಮೆಟ್ಟಿಲೇರಿದ್ದು, ಮಠದ ವಿವಾದ ಇನ್ನೂ ತಾರಕ್ಕೇರಿದಂತಾಗಿದೆ.
ಟ್ರಸ್ಟ್ನ ಕೆಲವರಿಂದ ಮಠವನ್ನ ತ್ಯಜಿಸಿದ್ದ ಸ್ವಾಮಿಜೀಗಳು, ತದನಂತರ ಮಠಕ್ಕೆ ಬರುತ್ತಾರೆಂದು ಹೇಳಲಾಗಿತ್ತು. ಆದರೆ, ಮಠಕ್ಕೆ ಬೇರೆಯ ಉತ್ತರಾಧಿಕಾರಿಯನ್ನ ನೇಮಕ ಮಾಡುವ ತಂತ್ರ ನಡೆದಿತ್ತಾ, ಎಂಬ ಪ್ರಶ್ನೆ ಇದೀಗ ಮೂಡಿದೆ.
ಶ್ರೀ ಮಠದ ಉತ್ತರಾಧಿಕಾರಿ ತಾವೇ ಎಂಬುದನ್ನ ಹೇಳಿರುವ ಸ್ವಾಮೀಜಿಗಳು, ಟ್ರಸ್ಟ್ನ ಎಲ್ಲರಿಗೂ ನ್ಯಾಯಾಲಯದ ಮೂಲಕ ನೋಟೀಸ್ ಕಳಿಸಲು ಮುಂದಾಗಿದ್ದು, ಇದೇ ತಿಂಗಳ 29ಕ್ಕೆ ದಿನಾಂಕ ನಿಗದಿಯಾಗಿದೆ.