Posts Slider

Karnataka Voice

Latest Kannada News

ಸ್ಪೋಟಕ ಮಾಹಿತಿ: ನಿರಂಜನ ಹಿರೇಮಠ “ಪಿಎ ವಿಜಯ” ಅಂಜಲಿಗೆ ಧಮಕಿ ಹಾಕಿದ್ದ: ಸಹೋದರಿಯಿಂದ ಬಹಿರಂಗ…

Spread the love

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆಯಾಗುವ ಮುನ್ನ ವಿಜಯ ಎಂಬ ಯುವಕನೊಂದಿಗೆ ಸಲುಗೆಯಿಂದ ಇದ್ಲು. ಆತನು ಬಂದು ಜಗಳವಾಡಿದ್ದ. ಆತ ನೇಹಾ ಹಿರೇಮಠಳ ತಂದೆಯಾದ ನಿರಂಜನ ಅವರ ಬಳಿ ಪಿಎಯಾಗಿದ್ದ ಎಂದು ಅಂಜಲಿಯ ಸಹೋದರಿ ಹೇಳಿಕೆ ನೀಡಿದ್ದಾಳೆ.

ಈಗಾಗಲೇ ಈ ಘಟನೆಯು ನ್ಯಾಯಾಲಯದಲ್ಲಿದ್ದು, ಫೋಕ್ಸೊ ಪ್ರಕರಣ ಕೂಡ ದಾಖಲಾಗಿದ್ದನ್ನ ಎರಡು ದಿನಗಳ ಹಿಂದಷ್ಟೇ ಮುಖಂಡ ಗುರುನಾಥ ಉಳ್ಳಿಕಾಶಿ ಸಿಐಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದೀಗ ಹತ್ಯೆಯಾದ ಅಂಜಲಿಯ ಸಹೋದರಿಯೇ ಹೇಳಿದ್ದಾಳೆ.

ಸ್ಪೋಟಕ ವೀಡಿಯೋ…

ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರೇ, ಫೋಕ್ಸೊ ಆರೋಪಿಗೆ ಸಹಾಯ ಮಾಡಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಏಕೆಂದರೆ, ಇಲ್ಲಿಯವರೆಗೆ ಈ ವಿಷಯವನ್ನ ಸ್ವತಃ ನಿರಂಜನ ಹಿರೇಮಠ ಅವರು ಹೊರಗೆ ಹೇಳಿಲ್ಲ.

ಅಂಜಲಿಯ ಜೊತೆಗಿದ್ದ ಫೋಕ್ಸೊ ಆರೋಪಿಗೆ ಸಹಾಯ ಮಾಡಿ, ಮತ್ತೆ ಅಂಜಲಿ ಹತ್ಯೆ ನಡೆದಾಗ ನ್ಯಾಯ ಸಿಗಬೇಕೆಂದು ಹೋರಾಟ ಮಾಡಿದ್ದನ್ನ ಸಾರ್ವಜನಿಕರು ಗಮನಿಸಿದ್ದಾರೆ. ಸೋಜಿಗವೆಂದರೇ, ಅದೇ ಅಂಜಲಿಗೆ ಮೊದಲು ಅನ್ಯಾಯವಾದಾಗ ಇವರೇ ಸರಿ ಮಾಡಿದ್ದು, ನಿರಂಜನ ಹಿರೇಮಠ ಅವರ ಮನಸ್ಥಿತಿಯ ಬಗ್ಗೆ ಸಂಶಯ ಮೂಡಿಸುತ್ತಿದೆ.


Spread the love

Leave a Reply

Your email address will not be published. Required fields are marked *