ಜೆಕೆ ಸ್ಕೂಲ್ ಬಳಿ “ಹಾಕ್ಯಾಟ್”- ಇಬ್ಬರನ್ನ ಜೈಲಿಗಟ್ಟಿದ ಹುಬ್ಬಳ್ಳಿ ಪೊಲೀಸರು…!!!

ಹುಬ್ಬಳ್ಳಿ: ಜೆಕೆ ಸ್ಕೂಲ್ ಬಳಿಯಲ್ಲಿ ನಡೆದ ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಸಾಯಂಕಾಲ ಗೆಳೆಯರ ನಡುವೆ ಕುಡಿದ ಮತ್ತಿನಲ್ಲಿ ಬೈಕ್ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ರೆಹಮಾನ್ ಎಂಬಾತನಿಗೆ ಕಿರಣ ಹಾಗೂ ಭೀಮಪ್ಪ ಚಾಕು ಇರಿಯಲು ಹೋದಾಗ, ಅದರಿಂದ ತಪ್ಪಿಸಿಕೊಂಡ ರೆಹಮಾನ್ ಅವರ ಬಳಿಯಿಂದ ಚಾಕು ಕಿತ್ತುಕೊಂಡು ಅವರಿಗೆ ಚುಚ್ಚಿದ್ದ.
ಈ ಘಟನೆಯಲ್ಲಿ ಮೂವರಿಗೂ ಗಾಯವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧನ ಮಾಡಿ ನ್ಯಾಯಾಂಗ ಬಂದಕ್ಕೆ ಒಪ್ಪಿಸಿದ್ದಾರೆ.