ಹುಬ್ಬಳ್ಳಿ: ಅಲ್ಲೇ “ಡ್ರಾ” ಅಲ್ಲೇ “ಬಹುಮಾನ”- ಮೂರೊತ್ತು ನಡೆದ ಮೂರು ಪತ್ರಿಕಾಗೋಷ್ಠಿಗಳ ಹಿಂದಿನ ಮರ್ಮವೇನು…!?
1 min readಮೊದಲು ಈ ಮೂರು ಪತ್ರಿಕಾಗೋಷ್ಠಿಯಲ್ಲಿನ ಪ್ರಮುಖ ಅಂಶಗಳನ್ನ ಒಮ್ಮೆ ಕೇಳಿಬಿಡಿ (ಪೂರ್ಣ ವೀಡಿಯೋ ನೋಡಿದ್ರೇ ಮಾತ್ರ)… ತದನಂತರ ವಿವರವಾದ ಮಾಹಿತಿಯನ್ನ ನೋಡಿ, ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ..
ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಕೇಂದ್ರದ ಹಾಲಿ ಸಚಿವರನ್ನ ಕ್ಷೇತ್ರದಿಂದ ಬದಲಾವಣೆ ಮಾಡಬೇಕು. ಇಲ್ಲದಿದ್ರೇ ಏಪ್ರಿಲ್ ಎರಡರಂದು ತೀರ್ಮಾನ ಹೇಳ್ತೇವಿ ಅಂದ್ರು. ಅದಾದ ನಂತರದ ಮಾಧ್ಯಮದ ಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು, ‘ಶ್ರೀಗಳ ಹೇಳಿಕೆಯನ್ನ ಆಶೀರ್ವಾದವೆಂದುಕೊಂಡು ಸುಮ್ಮನಿರುವೆ. ಆಗಿರುವ ತಪ್ಪು ಕಲ್ಪನೆಯನ್ನ ಸರಿ ಮಾಡಿಕೊಳ್ತೇನಿ’ ಅಂದ್ರು. ಇದಾದ ನಂತರ ಕೊನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ, ‘ಕ್ಷೇತ್ರ ಬದಲಾವಣೆ ಸಾಧ್ಯವಿಲ್ಲ. ಸ್ವಾಮೀಜಿಗಳ ಜೊತೆ ಮಾತನಾಡುತ್ತೇನೆ’ ಅಂದ್ರು.
ಇದು ನಡೆದದ್ದು. ಆದರೆ, ಹೀಗೆ ನಡೆಯಲು ಅಥವಾ ನಡೆಸಲು ಮುಂದಾಗಿದ್ದು ಯಾರು. ಇವತ್ತು ನಡೆದ ಈ ರಾಜಕೀಯ ಡ್ರಾಮಾದ ಸೂತ್ರಧಾರ ಯಾರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನ ಮುಜುಗರಕ್ಕೀಡು ಮಾಡುವ ಷಡ್ಯಂತ್ರದ ಮುಂದುವರೆದ ಭಾಗವೇ ಇದು ಎಂಬ ಪ್ರಶ್ನೆ ಮೂಡತೊಡಗಿದೆ.
ಟಿಕೆಟ್ ಅನೌನ್ಸ್ ಆದ ವಾರದ ನಂತರ ಹೀಗೇಲ್ಲ ನಡೆಸುತ್ತಿರುವ ರಾಜಕೀಯದ ಬಗ್ಗೆ ಮಾಹಿತಿ ಕೊರತೆ ಎಲ್ಲರಿಗೂ ಇದೆ. ಆದರೆ, ಇವತ್ತಿನದ್ದು ಮಾತ್ರ ಬಿಜೆಪಿಯಲ್ಲಿ ಬಿಜೆಪಿಯವರೇ ಮಾಡಿದ ಬಹುದೊಡ್ಡ ರಾಜಕೀಯ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎನಿಸದೇ ಇರದು.