ಹುಬ್ಬಳ್ಳಿಯಲ್ಲಿ “ಆಪ್ತಮಿತ್ರ”ನ ಕರಳು ಬಗೆದ ರಕ್ಕಸರು… ರಕ್ತಸಿಕ್ತ ಗೋಪನಕೊಪ್ಪ…!!!
1 min readಹುಬ್ಬಳ್ಳಿ: ಜೊತೆಗಿದ್ದವರೇ ಯುವಕನ ಹೊಟ್ಟೆ ಬಗೆದು ಹತ್ಯೆ ಮಾಡಿರುವ ಪ್ರಕರಣ ಹುಬ್ಬಳ್ಳಿಯ ಗೋಪನಕೊಪ್ಪದ ಹನಮಂತ ದೇವಸ್ಥಾನದ ಬಳಿ ಸಂಭವಿಸಿದೆ.
ಪ್ರಕಾಶ ಮಾನೆ ಎಂಬಾತನಿಗೆ ಮಚ್ಚಿನಿಂದ ಕಂಡ ಕಂಡಲ್ಲಿ ಚುಚ್ಚಲಾಗಿತ್ತು. ಹೊಟ್ಟೆಯಲ್ಲಿನ ಅಂಗಾಂಗಗಳು ಹೊರಗೆ ಬಿದ್ದಾಗ ಬಿಟ್ಟು ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಪ್ರಕಾಶನನ್ನ ಆಸ್ಪತ್ರೆಗೆ ಸಾಗಿಸಿದರೂ, ಪ್ರಯೋಜನವಾಗಿಲ್ಲ.
ಪ್ರಕಾಶನ ಕೊಲೆಯನ್ನ ಕಿರಣ ಬಡಿಗೇರ ಹಾಗೂ ಸಂಗಮೇಶ ಎಂಬುವವರು ಮಾಡಿದ್ದಾರೆಂದು ಹೇಳಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಕೇಶ್ವಾಪುರ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.