ಧಾರವಾಡದ “ಡೈರಿ ರಸ್ತೆಯಲ್ಲಿ” ಓರ್ವನ ಕೊಲೆ, ಮತ್ತೋರ್ವನ ಸ್ಥಿತಿ ಗಂಭೀರ…!!!
1 min readಧಾರವಾಡ: ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಕಾರಿನಲ್ಲಿದ್ದ ಹಲವರು ಹಲ್ಲೆ ಮಾಡಿರುವ ಪ್ರಕರಣ ಡೈರಿ ರಸ್ತೆಯಲ್ಲಿ ನಡೆದಿದ್ದು, ಓರ್ವ ಸಾವಿಗೀಡಾಗಿ, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಹತ್ಯೆಯಾದ ಯುವಕನನ್ನ ಅರವಟಗಿಯ ಕಲ್ಲನಗೌಡ ಪಾಟೀಲ ಎಂದು ಗುರುತಿಸಲಾಗಿದ್ದು, ತಡಸಿನಕೊಪ್ಪದ ಸುನೀಲ ಶಿವಪ್ಪ ಜಕ್ಕಣ್ಣನವರಗೆ ತೀವ್ರವಾದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರ ಜೊತೆ ಕಾರಲ್ಲಿ ಬಂದವರು ಜಗಳವಾಡಿದ್ದಾರೆ. ನಂತರ ಕಾರಿನಲ್ಲಿದ್ದ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾರೆಂದು ಗೊತ್ತಾಗಿದೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.