Posts Slider

Karnataka Voice

Latest Kannada News

ತಡಕೋಡದಲ್ಲಿ ಘರ್ಷಣೆ: ಸಂಭಾಜಿ ಜಾಧವ ಸೇರಿ ಹಲವರು ಪರಾರಿ… ಬೀಡುಬಿಟ್ಟ ಪೊಲೀಸರು…!

Spread the love

ಧಾರವಾಡ: ಸೌಹಾರ್ಧತೆಗೆ ಧಕ್ಕೆ ಬರುವ ಹಾಗೇ ನಡೆದುಕೊಂಡು ಬಂಧನಕ್ಕೆ ಒಳಗಾಗಿರುವ ಯುವಕನ ಮನೆಗೆ ನುಗ್ಗಿ ಧಾಂದಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಡೆದಿದ್ದು, ಗ್ರಾಮದಲ್ಲಿ ನೂರಾರೂ ಪೊಲೀಸರು ಬೀಡು ಬಿಟ್ಟಿದ್ದಾರೆ.

ಸದ್ದಾಂಹುಸೇನ ಇಸ್ಮಾಯಿಲಸಾಬ ನದಾಫ ಎಂಬ ಯುವಕ ಬೇರೆ ಸಮುದಾಯದ ಭಾವನೆಗೆ ದಕ್ಕೆ ಬರುವ ಹಾಗೇ ಪೋಟೋ ಎಡಿಟ್ ಮಾಡಿ, ಸ್ಟೇಟಸ್ ಇಟ್ಟುಕೊಂಡಿದ್ದ. ಈ ಬಗ್ಗೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ಆತನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಡಕೋಡದಲ್ಲಿನ ಸದ್ದಾಂನ ಮನೆಗೆ ನುಗ್ಗಿ ಧಾಂದಲೆ ಮಾಡಿ, ಮನೆಯ ಬಾಗಿಲು ಮುರಿದು ಅಪರಾಧ ಮಾಡಿರುವ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವರೆನ್ನಲಾದ ಸಂಭಾಜಿ ಜಾಧವ ಪರಾರಿಯಾಗಿದ್ದು, ಆತನ ಜೊತೆಗಿರುವವರು ಊರು ಬಿಟ್ಟಿದ್ದಾರೆ. ಪೊಲೀಸರು ಆರೋಪಿಗಳ ಹುಡುಕಾಟ ಆರಂಭಿಸಿದ್ದು, ತಡಕೋಡದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ.

 


Spread the love

Leave a Reply

Your email address will not be published. Required fields are marked *