ಹುಬ್ಬಳ್ಳಿಯಲ್ಲೊಂದು “ಅಮಾನವೀಯ ಘಟನೆ”- ಕೂಡಿ ಹಾಕಿ ರಾಕ್ಷಸಿ ಕೃತ್ಯ…!!!
1 min readಹುಬ್ಬಳ್ಳಿ: ಕೆಲವೊಂದಿಷ್ಟು ಯುವಕರು ಅದ್ಯಾವ ರೀತಿಯಲ್ಲಿ ಮಾನವೀಯತೆ ಕಳೆದುಕೊಂಡು ನಡೆಯುತ್ತಿದ್ದಾರೋ ಎಂಬ ಪ್ರಶ್ನೆ ಪದೇ ಪದೇ ಮೂಡುವಂತೆ ಘಟನೆಗಳು ವಾಣಿಜ್ಯನಗರಿ ಎಂದು ಕರೆಸಿಕೊಳ್ಳುವ ಚೋಟಾ ಮುಂಬೈನಲ್ಲಿ ನಿಲ್ಲುತ್ತಲೇ ಇಲ್ಲ.
ಸುಖಾಸುಮ್ಮನೆ ಕಂಡ ಕಂಡವರನ್ನ ಹೊಡೆಯುವುದು ಒಂದು ಚಟದ ರೀತಿಯಾಗಿದೆ. ಇಂತಹದ್ದೆ ಒಂದು ರಾಕ್ಷಸಿ ಕೃತ್ಯ ನಗರದಲ್ಲಿ ನಡೆದಿದ್ದು, ಯುವಕನಿಗೆ ಚಿತ್ರ ಹಿಂಸೆ ನೀಡಲಾಗಿದೆ.
ಘಟನೆ ನಡೆದ ಅದೇಷ್ಟೋ ಗಂಟೆಗಳು ನಡೆದ ಮೇಲೆ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು, ಪ್ರಮುಖ ಆರೋಪಿಯನ್ನ ಬಂಧಿಸುವ ಗೋಜಿಗೂ ಹೋಗಿಲ್ಲವೆಂದು ಹೇಳಲಾಗಿದೆ.
ಇಡೀ ಘಟನೆಯ ಸಂಪೂರ್ಣ ವಿವರವನ್ನ ನಾಳೆ ಕರ್ನಾಟಕವಾಯ್ಸ್.ಕಾಂ ಹೊರ ಹಾಕಲಿದ್ದು, ಕಿರಾತಕರನ್ನ ಪೊಲೀಸರು ಹೆಡಮುರಿಗೆ ಕಟ್ಟಬೇಕಿದೆ.