ಬೂಟು ನೆಕ್ಕಿದ್ಯಾರು…!? ಬೂಟಾಗಿದ್ದು ಯಾರೂ…!? ಹುಬ್ಬಳ್ಳಿಯಲ್ಲಿ ಯಾರು ಏನೇನಂದ್ರು…!? Exclusive video…

ಬ್ರಿಟಿಷ್ರ ಬೂಟ್ ನೆಕ್ಕಿದವರಿಂದ ಪಾಠ ಕಲಿಯುವ ಅಗತ್ಯವಿಲ್ಲ: ಬಿ.ಕೆ. ಹರಿಪ್ರಸಾದ
ಹುಬ್ಬಳ್ಳಿ: ಬಿಜೆಪಿಯ ಪೂರ್ವಜರು ಬ್ರಿಟಿಷ್ ರ ಬೂಟ್ ನೆಕ್ಕಿದವರು. ಅವರಿಂದ ಕಾಂಗ್ರೆಸ್ ಪಕ್ಷ ಪಾಠ ಕಲಿಯುವ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ 7ಲಕ್ಷ ಜನ ಪಾಲ್ಗೊಂಡಿದ್ದರು. ಅವರಲ್ಲಿ ಒಬ್ಬರಾದರೂ ಬಿಜೆಪಿಯವರು ಇದ್ದರೆ ಅವರ ಹೆಸರು ಹೇಳಲಿ. ಬ್ರಿಟಿಷ್ರ ಪರವಾಗಿ ಯಾರು ಇದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಂಥವರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತ ಬಂದಿದೆ ಎಂದರು.
ಹಿಜಾಬ್ ವಿಷಯ ಸುಪ್ರೀಂ ಕೋರ್ಟ್ನಲ್ಲಿದೆ. ಅಲ್ಲಿಂದ ತೀರ್ಪು ಬಂದ ಬಳಿಕ ಕಾಂಗ್ರೆಸ್ ಪಕ್ಷ ತೀರ್ಮಾನ ಕೈಗೊಳ್ಳತ್ತದೆ ಎಂದು ಹೇಳಿದರು.
Exclusive video’s..
ಕಾಂಗ್ರೆಸ್ಸಿನಲ್ಲಿ ಹರಿಪ್ರಸಾದ ಬೂಟಿಗಿಂತ ಕಡೆಯಾಗಿದ್ದಾರೆ; ಸಚಿವ ಜೋಶಿ ತಿರುಗೇಟು..!
ಹುಬ್ಬಳ್ಳಿ; ಕಾಂಗ್ರೆಸ್ ಪಕ್ಷದಲ್ಲಿ ಬಿ.ಕೆ.ಹರಿಪ್ರಸಾದ್ ಬೂಟ್ ಗಿಂತ ಕಡೆಯಾಗಿದ್ದಾರೆ. ಅದಕ್ಕಾಗಿ ಅವರು ಆ ಭಾಷೆ ಬಳಸಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರು ಬ್ರಿಟಿಷರ ಬೂಟ್ ನೆಕ್ಕುವವರು ಎಂದು ಹರಿಪ್ರಸಾದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಅವರ ಭಾಷೆ ನಾನು ಬಳಸಲ್ಲ. ಹರಿಪ್ರಸಾದ್ ಅವರು ಏನ ಮಾತಾಡಿದ್ರು ಅವರನ್ನು ಮಂತ್ರಿ ಮಾಡಲ್ಲ. ಸುಮ್ಮನೆ ನೀವು ಹಂಗೆ ಮಾತಾಡ್ತಾ ಹೋಗೋದು ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಹತಾಶೆ ಆಗಿರುವ ಕಾರಣಕ್ಕೆ ಹರಿಪ್ರಸಾದ್ ಹಾಗೆ ಮಾತಾಡ್ತೀದಾರೆ. ಆರ್.ಎಸ್.ಎಸ್ ಬಿಜೆಪಿ ಬೈದ್ರೆ ಸೋನಿಯಾ ಗಾಂಧಿ ಪ್ರಸನ್ನಳಾಗಿ ಮಂತ್ರಿ ಮಾಡಬಹದು ಅಂದುಕೊಂಡಿದ್ದಾರೆ. ಆದ್ರೆ ಸಿದ್ದರಾಮಯ್ಯ ಯಾವತ್ತೂ ಇವರನ್ನು ಮಂತ್ರಿ ಮಾಡಲ್ಲ. ಈ ಕಡೆ ಡಿಕೆಶಿವಕುಮಾರ್ ಕೂಡಾ ಇವರನ್ನು ಲೈಕ್ ಮಾಡಲ್ಲ. ಇದು ಹರಿಪ್ರಸಾದ್ ಅವರ ಕಲ್ಚರ್ ತೋರಿಸುತ್ತೆ ಎಂದು ಜೋಶಿ ವಾಗ್ದಾಳಿ ನಡೆಸಿದರು.