ಹುಬ್ಬಳ್ಳಿಯಲ್ಲಿ ಹಾರಿದ್ದು ಒಂದೇ “ಗುಂಡಲ್ಲ”, ಬರೋಬ್ಬರಿ “ಮೂರು”- ಅಸಲಿಯತ್ತು ಬಿಚ್ಚಿಟ್ಟ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ…!

ಹುಬ್ಬಳ್ಳಿ: ನಟೋರಿಯಸ್ ರೌಡಿ ಷೀಟರ್ ಸತೀಶನನ್ನ ಕರೆದುಕೊಂಡು ಸ್ಥಳ ಮಹಜರಿಗೆ ಹೋದಾಗ, ಆತ ಪಿಎಸ್ಐ ವಿನೋದಗೆ ಕಲ್ಲಿನಿಂದ ಹೊಡೆದು ತಪ್ಪಿಸಿಕೊಳ್ಳೊ ಪ್ರಯತ್ನ ಮಾಡಿದಾಗಲೇ ಫೈರಿಂಗ್ ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದರು.
ಆರೋಪಿ ಸತೀಶ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್ಸಪೆಕ್ಟರ್ ರಫೀಕ ತಹಶೀಲ್ದಾರ ಅವರು, ಗಾಳಿಯಲ್ಲಿ ಎರಡು ಬಾರಿ ಗುಂಡು ಹಾರಿಸಿದರೂ ಪ್ರಯೋಜನವಾಗಿಲ್ಲ. ಆಗ ಕಾಲಿಗೆ ಫೈರಿಂಗ್ ಮಾಡಿದ್ದಾರೆಂದರು.
ಕಮೀಷನರ್ ಹೇಳಿಕೆ ಇಲ್ಲಿದೆ ನೋಡಿ…
ಪಿಎಸ್ಐ ವಿನೋದ ಅವರಿಗೂ ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೌಡಿಗಳನ್ನ ಮಟ್ಟ ಹಾಕಲಾಗುವುದು ಎಂದು ಕಮೀಷನರ್ ಹೇಳಿದರು.