Posts Slider

Karnataka Voice

Latest Kannada News

“ಹೈಸ್ಕೂಲ್ ಪಿಇ ಮಾಸ್ತರ್” ಬಸಾಪುರ ಡೆಪ್ಟೇಟೇಷನ್: ಕಿಮ್ಮತ್ತಿಲ್ಲದ ಡಿಡಿಪಿಐ ಆದೇಶ…

Spread the love

ಧಾರವಾಡ: ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹುದ್ದೆಯಲ್ಲಿ ಕೂತಿರುವ ಎಸ್.ಎಸ್.ಕೆಳದಿಮಠ ಅವರ ಆದೇಶಗಳು, ಕಿಮ್ಮತ್ತಿಲ್ಲದೇ ಕೇವಲ ಆದೇಶವಾಗಿ ಕೊಳೆಯುತ್ತಿವೆ.

ಧಾರವಾಡ ತಾಲೂಕಿನ ನವಲೂರ ಗ್ರಾಮದ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಶಿಧರ ಬಸಾಪೂರ ಅವರ ಡೆಪ್ಟೇಟೇಷನ್ ರದ್ದು ಮಾಡಿ, ಮರಳಿ ನವಲೂರಿಗೆ ಹೋಗಬೇಕೆಂದು ಮಾಡಿದ್ದ ಆದೇಶ ಡಿಡಿಪಿಐ ಕಚೇರಿಯಲ್ಲಿ ಕೊಳೆಯುತ್ತಿದೆ.

ದೈಹಿಕ ಶಿಕ್ಷಣ ಶಿಕ್ಷಕ ಶಶಿಧರ ಬಸಾಪೂರ ಅವರು, ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಮಾಜಿ ಶಾಸಕ ಅಮೃತ ದೇಸಾಯಿ ಹೆಸರಿನಲ್ಲಿ ತಮ್ಮ “ಶಾಲೆ ಬಿಟ್ಟು” ದಿನಗಳನ್ನ ಕಳೆದರು. ಈಗ ಶಾಸಕ ವಿನಯ ಕುಲಕರ್ಣಿಯವರ ಹೆಸರು ಬಳಕೆ ಮಾಡಿಕೊಂಡು “ಶಾಲೆ ಬಿಟ್ಟು” ದಿನಗಳನ್ನ ಕಳೆಯುತ್ತಿದ್ದಾರೆ.

ಸರಕಾರದ ಸಂಬಳ ಪಡೆದು ವರ್ಷಗಟ್ಟಲೆ ಶಾಲೆ ಬಿಟ್ಟು ಹೊರಗಡೆ ಇರುವ ಶಶಿಧರ ಬಸಾಪುರ ಅವರಂತಹ ಶಿಕ್ಷಕರಿಗೆ ಅದ್ಯಾವ ಕಾರಣಕ್ಕೆ ರಿಲೀವ್ ಮಾಡುತ್ತಿಲ್ಲ ಎಂಬುದನ್ನ ಇಲಾಖೆಯ ಕಮೀಷನರ್ ಹೇಳಬೇಕಿದೆ.


Spread the love

Leave a Reply

Your email address will not be published. Required fields are marked *