‘RDPR’ಗೆ ಸರಕಾರಿ ಶಾಲಾ ಆಡಳಿತ- ಸಿಡಿದೆದ್ದ ಗ್ರಾಮೀಣ ಶಿಕ್ಷಕರ ಸಂಘ…!!!

ಹುಬ್ಬಳ್ಳಿ: ಸರಕಾರಿ ಶಾಲೆಗಳ ಆಡಳಿತವನ್ನ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿಸಲು ರಾಜ್ಯ ಸರಕಾರ ಚಿಂತನೆ ನಡೆಸಿರುವ ಬೆನ್ನಲ್ಲೇ, ಇದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗತೊಡಗಿದೆ.
ಸರಕಾರದ ಚಿಂತನೆಯೂ ಸರಕಾರಿ ಶಾಲೆಗಳಿಗೆ ಎಷ್ಟು ತೊಂದರೆಯನ್ನ ತರಲಿದೆ ಎಂಬುದನ್ನ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನ ಭೇಟಿ ಮಾಡಿದ ಗ್ರಾಮೀಣ ಶಿಕ್ಷಕರ ಸಂಘ ಮನವರಿಕೆ ಮಾಡಿಕೊಟ್ಟಿದೆ.
ಈ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…
ಶಾಲೆಗಳಲ್ಲಿ ರಾಜಕೀಯ ಬಂದು ಜಾತಿಯೂ ಹೆಚ್ಚಾಗುತ್ತದೆ ಎಂಬ ಆತಂಕವನ್ನ ಸ್ವತಃ ಗ್ರಾಮೀಣ ಶಿಕ್ಷಕರ ಸಂಘವೇ ಹೊರ ಹಾಕಿದ್ದನ್ನ ಸರಕಾರ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ.