ಧಾರವಾಡ: ಬಾಡದ “ರಜಾಕ್ ಕವಲಗೇರಿ”ಯ ಭೀಭತ್ಸ ಹತ್ಯೆ… Big Exclusive

ಧಾರವಾಡ: ನಗರದಿಂದ ಧಾರವಾಡ ತಾಲೂಕಿನ ಬಾಡ ಗ್ರಾಮಕ್ಕೆ ಬೈಕಿನಲ್ಲಿ ಹೊರಟಿದ್ದ ನೌಕರನೊಬ್ಬನನ್ನ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಈಗಷ್ಟೇ ಸಂಭವಿಸಿದೆ.
ಕೆಇಬಿಯಲ್ಲಿ ನೌಕರಿ ಮಾಡುತ್ತಿದ್ದ ರಜಾಜ ಕವಲಗೇರಿ ಎಂಬ 48 ವರ್ಷದ ವ್ಯಕ್ತಿಯನ್ನ ಹರಿತವಾದ ಆಯುಧಗಳಿಂದ ಕಂಡ ಕಂಡಲ್ಲಿ ಇರಿದು ಹತ್ಯೆ ಮಾಡಲಾಗಿದೆ.
ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದು, ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ.