ನಡು ರಸ್ತೆಯಲ್ಲೇ “ಕಾಂಗ್ರೆಸ್” ಬೆಂಬಲಿತ ಗ್ರಾಪಂ ಅಧ್ಯಕ್ಷನ ಭೀಕರ ಹತ್ಯೆ…
1 min readರಸ್ತೆಯುದ್ದಕ್ಕೂ ಹರಿದ ರಕ್ತ
ನಡು ಬೀದಿಯಲ್ಲೇ ಪ್ರಾಣ ಬಿಟ್ಟ ಸದಸ್ಯ
ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನ ಬರ್ಭರವಾಗಿ ಕೊಲೆಗೈದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರದಲ್ಲಿ ಸಂಭವಿಸಿದೆ.
ಘಟನೆಯೂ ಇಡೀ ಗ್ರಾಮವನ್ನ ಬೆಚ್ಚಿ ಬೀಳಿಸಿದೆ. ಮದರಾ ಗ್ರಾಮ ಪಂಚಾಯತಿ ಅಧ್ಯಕ್ಷರೂ ಆಗಿದ್ದ ಕಾಂಗ್ರೆಸ್ ಮುಖಂಡ ಗೌಡಪ್ಪಗೌಡ ಕೊಲೆಯಾದ ದುರ್ದೈವಿಯಾಗಿದ್ದಾನೆ.
ನಟ್ಟ ನಡು ರಸ್ತೆಯಲ್ಲಿ ಎಲ್ಲರೆದುರೇ ಹಾಡುಹಗಲೇ ಈ ಕೊಲೆ ನಡೆದಿದ್ದು, ಸಾರ್ವಜನಿಕರು ಭಯಭೀತರಾಗುವ ಸ್ಥಿತಿ ನಿರ್ಮಾಣವಾಗಿದೆ. ಘಟನೆಯ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಶಾಸಕ ಎಂ.ವೈ.ಪಾಟೀಲ, ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ. ಕೂಡಲೇ ಆರೋಪಿಗಳನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.