Posts Slider

Karnataka Voice

Latest Kannada News

ಸಚಿವ ಬಿ.ನಾಗೇಂದ್ರ ಸೇರಿ ಮೂವರಿಗೆ “ಜಾಮೀನು ರಹಿತ ವಾರಂಟ್”- Big exclusive

Spread the love

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಸೇರಿ ಮೂವರಿಗೆ ಜಾಮೀನು ರಹಿತ ವಾರಂಟ್ ನೀಡಲು ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ವಿಎಸ್‌ಎಲ್ ಸ್ಟೀಲ್ಸ್ ಕಂಪನಿಯ ಮ್ಯಾನೇಜರ್ ರಾಘವೇಂದ್ರ ಘೋಡಕೆ ಅವರು ನೀಡಿರುವ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವೂ ಬಿ.ಸಿ.ಇನ್‌ಪಾಸ್ಟ್ರಕ್ಚರ್ ಆ್ಯಂಡ್ ರಿಸೋರ್ಸ್ ಕಂಪನಿ, ಅನಿಲ ರಾಜಶೇಖರ ಚುಂಡೂರ ಭಾಸ್ಕರ್ ಮತ್ತು ಬಿ.ನಾಗೇಂದ್ರ ಅವರುಗಳ ಮೇಲೆ ವಾರಂಟ್ ಹೊರಡಿಸಿದೆ.

ಈ ಮೊದಲು ಮೂರು ದಿನಾಂಕಗಳಿಗೆ ಹಾಜರಾಗಿರಲಿಲ್ಲ. ಈಗ ಮತ್ತೆ 31 ಅಕ್ಟೋಬರ್ ರಂದು ಪ್ರಕರಣದ ವಿಚಾರಣೆ ನಡೆಯಲಿದೆ.


Spread the love

Leave a Reply

Your email address will not be published. Required fields are marked *