PI ಕಾಡ’ದೇವರ’ಮಠರಿಂದ “ತಿರುಪತಿ”ಗೆ ಗೋವಿಂದ “ಸ್ಮರಣೆ”- ಧಾರವಾಡ “ಶ್ರೀ ಬಾರ್” ಮುಂದಿನ ಗಲಾಟೆ ಹಿಂದಿನ ಅಸಲಿಯತ್ತಿಲ್ಲಿದೆ…!

ಧಾರವಾಡ: ಆನೆ ನಡೆದದ್ದೆ ಹಾದಿ ಎನ್ನುವ ಸ್ಥಿತಿಗೆ ಬಂದಿರುವ ಕೆಲವು ಯುವ ಫುಡಾರಿಗಳಿಗೆ ಕೆಲವೇ ಸಮಯದಲ್ಲಿ ಹಿಡಿದು ಬೆಂಡೆತ್ತಿದ್ದ ಘಟನೆ ಧಾರವಾಡದ ಶಹರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ ಮಾಡಿದ್ದಾರೆ.
ಜಕಣಿಬಾವಿಯ ಬಳಿಯಿರುವ ಶ್ರೀ ಬಾರ್ ಎದುರಿಗೆ ಅನೂಪ ನೀಲಣ್ಣನವರ ಎಂಬಾತನನ್ನ ಸಿನೇಮಾ ಶೈಲಿಯಲ್ಲಿ ತಿರುಪತಿ ಹಿರೇಮನಿ ಆ್ಯಂಡ್ ಗ್ಯಾಂಗ್ ಹೊಡೆಯುತ್ತಿರುವ ವೀಡಿಯೋ ವೈರಲ್ ಆಗಿತ್ತು.
ತನ್ನ ಸ್ನೇಹಿತ ಶಶಿಧರ ಕೋಲಕಾರ ಜೊತೆಗೆ ಬೈಕಿನಲ್ಲಿ ಹೋಗುತ್ತಿದ್ದ ಅನೂಪನನ್ನ ತಡೆದು ಗುಂಪು ಕಟ್ಟಿಕೊಂಡು ತಿರುಪತಿ ಎಂಬಾತ, ಕೈಯಲ್ಲಿನ ಖಡ್ಗದಿಂದ ತಲೆಗೆ ತೀವ್ರವಾಗಿ ಹೊಡೆದಿದ್ದ.
ವಿಷಯ ಗೊತ್ತಾಗುತ್ತಿದ್ದ ಹಾಗೇ, ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ, ತಿರುಪತಿಗೆ ಕಾನೂನು ಪಾಠ ಮಾಡಿದ್ದಾರೆ. ತಕ್ಷಣವೇ ಕ್ರಮ ಜರುಗಿಸಿದ್ದರಿಂದ ಉಂಡಾಡಿಗಳಿಗೆ ಬಿಸಿತುಪ್ಪವಾಗಿದೆ.