ಧಾರವಾಡ ಎಸಿಪಿಯಾಗಿ “ಪ್ರಶಾಂತ ಸಿದ್ಧನಗೌಡರ” ಅಧಿಕಾರ ಸ್ವೀಕಾರ…

ಧಾರವಾಡ: ನಗರದ ಸಹಾಯಕ ಪೊಲೀಸ್ ಆಯುಕ್ತರಾಗಿ ಪ್ರಶಾಂತ ಸಿದ್ಧನಗೌಡರ ಅವರು ಇಂದು ಅಧಿಕಾರವನ್ನ ಸ್ವೀಕರಿಸಿದರು.
ರಾಜ್ಯ ಗುಪ್ತವಾರ್ತೆಯಲ್ಲಿ ಪ್ರಶಾಂತ ಸಿದ್ಧನಗೌಡರ ಅವರು ಮೂಲತಃ ನೂಲ್ವಿ ಗ್ರಾಮದವರಾಗಿದ್ದು, ರಾಜ್ಯದ ಹಲವು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಇಂದು ಅಧಿಕಾರ ಸ್ವೀಕರಿಸಿದ ನಂತರ ಧಾರವಾಡ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ ಅವರು ಎಸಿಪಿಯವರಿಗೆ ಶುಭಾಶಯ ಕೋರಿದರು.
ಈ ಸಮಯದಲ್ಲಿ ಎಎಸ್ಐ ವೀರೇಶ ಬಳ್ಳಾರಿ, ಎ.ಎ.ಹಬೀಬ, ಮಹೇಶ ಕಿತ್ತೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.