Mla ವಿನಯ ಕುಲಕರ್ಣಿ ಧಾರವಾಡ ಜಿಲ್ಲೆಗೆ ಎಂಟ್ರಿ: ವಿಚಾರಣೆ 23ಕ್ಕೆ ಮುಂದೂಡಿಕೆ…

ಧಾರವಾಡ: ಶಾಸಕ ವಿನಯ ಕುಲಕರ್ಣಿಯವರಿಗೆ ಧಾರವಾಡ ಜಿಲ್ಲೆಗೆ ಪ್ರವೇಶ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನ ಇದೇ ತಿಂಗಳ 23 ಕ್ಕೆ ಮುಂದೂಡಿ ಹೈಕೋರ್ಟ್ ಆದೇಶ ನೀಡಿದೆ.
ಜನಪ್ರತಿನಿಗಳ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ಧಾರವಾಡ ಹೈಕೋರ್ಟಿನಲ್ಲಿ ಇದ್ದಿದ್ದರಿಂದ ಇಲ್ಲಿನ ಹೈಕೋರ್ಟಿನಲ್ಲಿ ಆದೇಶ ನೀಡಲಾಗಿದೆ.
ಧಾರವಾಡ ಜಿಲ್ಲೆಗೆ ಪ್ರವೇಶ ಕೊಡುವಂತೆ ಶಾಸಕ ವಿನಯ ಕುಲಕರ್ಣಿ ಈ ಹಿಂದೆಯೂ ಹೈಕೋರ್ಟಿನಿಂದ ಅವಕಾಶ ಕೋರಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.