ಭಜನೆ ಮಾಡಿ, ಹುಬ್ಬಳ್ಳಿ ಪಾಲಿಕೆಯಲ್ಲೇ ಮಲಗಿದ ಶಾಸಕ, ಮುಖಂಡರು…

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿವಾದ
ಅವಕಾಶ ನೀಡುವವರೆಗೂ ಹೋರಾಟ ನಿರಂತರ
ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಒಡೆತನದ ಈದ್ಗಾ ಮೈದಾನದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಗಣೇಶ ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಬೇಕೆಂದು ಭಾರತೀಯ ಜನತಾ ಪಕ್ಷದ ಶಾಸಕರ ಸಮೇತ ಹೋರಾಟ ನಡೆದಿದ್ದು, ಅದೀಗ ತೀವ್ರ ಸ್ವರೂಪ ಪಡೆಯುತ್ತಿದೆ.
ನಿನ್ನೆಯಿಂದಲೇ ಆರಂಭಗೊಂಡ ಹೋರಾಟದಲ್ಲಿ ಭಜನೆ ಮಾಡಿ, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದರು. ಶಾಸಕ ಅರವಿಂದ ಬೆಲ್ಲದ ಸೇರಿ ಬಹುತೇಕರು ಪಾಲಿಕೆ ಕಚೇರಿಯಲ್ಲಿ ಮಲಗಿ, ಪ್ರತಿಭಟನೆ ಮುಂದುವರೆಸಿದ್ದಾರೆ.
ವೀಡಿಯೋ..
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸರಕಾರ ಗಣೇಶ ಪ್ರತಿಷ್ಠಾಪನೆ ಮಾಡಲು ಅವಕಾಶ ಕೊಡಲಿದೆ ಎಂಬ ಭರವಸೆಯಿದೆ ಎಂದರು.