Posts Slider

Karnataka Voice

Latest Kannada News

ಪಾಪ… ಧಾರವಾಡ DDPI ಬಹಳ ಮುಗ್ಧರಂತೆ: ಕೋರ್ಟಲ್ಲಿ ಕೇಸ್ ಇದ್ರೂ ಪರ್ಮಿಷನ್ ಕೊಡ್ತಾರಂತೆ….!!!!

Spread the love

ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಜಿಲ್ಲೆಯ ಡಿಡಿಪಿಐ ಅವರು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಸಮಯದಲ್ಲಿ ಗ್ರ್ಯಾಂಟ್ ಬಿಡುಗಡೆ ಮಾಡಿ, ಅದರಲ್ಲಿ ತಮ್ಮದೇನೂ ತಪ್ಪೇ ಇಲ್ಲವೆಂದು ಸಾಬೀತು ಮಾಡಲು ಹರಸಾಹಸ ನಡೆಸುತ್ತಿರುವುದು ಕಂಡು ಬಂದಿದೆ.

ಧಾರವಾಡ ಜಿಲ್ಲೆಯ ಶಾಲೆಯೊಂದರ ಅನುದಾನ ಮತ್ತೂ ಇನ್ನುಳಿದ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪಾಪ… ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರಿಗೆ ಅದ್ಯಾವುದು ಗೊತ್ತೆ ಇಲ್ಲದಷ್ಟು ಮುಗ್ಧರು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ.

ಈ ಹುಬ್ಬಳ್ಳಿಯ ಬಿಇಓ ಕಚೇರಿಯಲ್ಲಿ ಎಸಿಬಿ ರೇಡಿಗೆ ಒಳಪಟ್ಟ ಬಿಇಓ ಇದೀಗ ಧಾರವಾಡ ಡಿಡಿಪಿಐ ಕಚೇರಿಯ ವಿಭಾಗವೊಂದಕ್ಕೆ ವಕ್ಕರಿಸಿದ್ದು, ಈ ಜಾಣ ಕುರುಡಿನ ಹಿಂದೆ “ಮನಿ”ಹೊಡೆದ ಪ್ರಕರಣದ ರೂವಾರಿಯ ಕೈವಾಡ ಇದೆ ಎನ್ನಲಾಗಿದೆ.

ಕಂಡ ಕಂಡವರ ಬಳಿ ತನ್ನ ಕೆಲಸಕ್ಕಾಗಿ ಕೈ ಕೈ ಮುಗಿಯುವ “ಮನಿ”ಹೊಡೆದವ, ಯಾರೂ ಇಲ್ಲದ ಸಮಯದಲ್ಲಿ ‘ಪೌರುಷ’ದ ಮಾತುಗಳನ್ನ ಆಡುವುದು ನಡೆದೇ ಇದೆ. ತನ್ನ ಭ್ರಷ್ಟತೆಯನ್ನ ಸ್ಮರಿಸಿಕೊಳ್ಳದಿದ್ದರೇ ಆತನ ಬರುವ ದಿನಗಳು ಮತ್ತಷ್ಟು ಬರ್ಭರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ನ್ಯಾಯಾಲಯದಲ್ಲಿ ಪ್ರಕರಣವಿದ್ದಾಗ ನಡೆಯುತ್ತಿರುವ ಅಕ್ರಮದ ಹಲವು ದಾಖಲೆಗಳು ಕರ್ನಾಟಕವಾಯ್ಸ್.ಕಾಂ ಬಳಿಯಿದ್ದು, ಡಿಡಿಪಿಐ ಅವರ ಮುಗ್ಧತೆ ಬಹಿರಂಗವಾಗಲಿದೆ.

ತಮ್ಮ ಮೇಲೆ ಬರಬಹುದಾದ ತಪ್ಪುಗಳು ಬೇರೆಯವರ ಹೆಗಲ ಮೇಲೆ- ಮುಂದುವರೆಯುವುದು


Spread the love

Leave a Reply

Your email address will not be published. Required fields are marked *