ರಾಜ್ಯಾಧ್ಯಂತ ‘PDO’ಗಳಿಂದ “ಅಸಹಕಾರ ಚಳುವಳಿ”- ಡೇಟ್ ಫಿಕ್ಸ್…

ಬೆಂಗಳೂರು: ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಅಸಹಕಾರ ಚಳುವಳಿ ನಡೆಸಲು ಮುಂದಾಗಿದ್ದು, ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟುವ ಸಾಧ್ಯತೆಯಿದೆ.
ರಾಜ್ಯದ ಪ್ರತಿ ಮನೆ ಮನೆಗೂ ತಲುಪುವ ಪಿಡಿಓಗಳ ಬಗ್ಗೆ ಸರಕಾರ ಅಸಡ್ಡೆ ಹೊಂದಿದ್ದು, ಹಲವು ಬೇಡಿಕೆಗಳು ಹಾಗೆಯೇ ಉಳಿದಿದ್ದು, ಅವುಗಳನ್ನ ಈಡೇರಿಸುವಂತೆ ಸಂಘ ಆಗ್ರಹಿಸಿದೆ.
ಇದೇ ತಿಂಗಳ 14 ರಿಂದ ರಾಜ್ಯ ಸರಕಾರದ ಜೊತೆ ಅಸಹಕಾರ ಚಳವಳಿ ನಡೆಸಲು ಸಂಘ ತೀರ್ಮಾನಿಸಿದ್ದು, ಸರಕಾರ ಇದಕ್ಕೆ ಯಾವ ಕ್ರಮ ಜರುಗಿಸುತ್ತದೆ ಎಂಬುದನ್ನ ಕಾದು ನೋಡಬೇಕಿದೆ.