Posts Slider

Karnataka Voice

Latest Kannada News

“ಚೀಟರ್ ಮೋನ್ಯಾ” ಸಮೇತ ಪ್ಯಾಮಿಲಿ ಮೇಲೆ FIR…

Spread the love

ಧಾರವಾಡ: ಹೊಯ್ಸಳನಗರದ ಮನೆಯೊಂದರ ಕಂಪೌಂಡ್‌ನಲ್ಲಿ ಕಾರು ನಿಲ್ಲಿಸಿದ್ದನ್ನ ಕೇಳಲು ಮನೆಯ ಮಾಲೀಕರು ಮತ್ತು ಬಾಡಿಗೆದಾರರ ಮೇಲೆ ಹಲ್ಲೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ ವಾಳ್ವೇಕರ ಅಲಿಯಾಸ್ ಚೀಟರ್ ಮೋನ್ಯಾ ಕುಟುಂಬದ ನಾಲ್ವರ ಮೇಲೆ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಡವಾಗಿ ಬೆಳಕಿಗೆ ಬಂದಿರುವ ಪ್ರಕರಣ ಇದ್ದಾಗಿದ್ದು, ಘಟನೆಯಲ್ಲಿ ಬಾಡಿಗೆದಾರ ವಿದ್ಯಾರ್ಥಿ ಹೃಷಕೇಶ ತಾಗಡೆ, ಮನೆಯ ಮಾಲೀಕ ರೋಹನ ಕಲಗಾರಗೆ ಗಾಯಗಳಾಗಿದ್ದು ತೀವ್ರ ರಕ್ತಸ್ರಾವವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ ವಾಳ್ವೇಕರ, ಯುವರಾಜ ವಾಳ್ವೇಕರ, ದೇವರಾಜ ವಾಳ್ವೇಕರ ಹಾಗೂ ಮಮತಾ ವಾಳ್ವೇಕರ ಮೇಲೆ ಪ್ರಕರಣ ದಾಖಲಾಗಿದ್ದು, ಉಪನಗರ ಠಾಣೆ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed