Posts Slider

Karnataka Voice

Latest Kannada News

ಮರಾಠಾ ‘ವಿಪ್ರ’ ಮಂಡಳ ಚುನಾವಣೆಯಲ್ಲಿ ಅಕ್ರಮ: ಮೊದಲ ಬಾರಿಗೆ ಬೀದಿಗಿಳಿದು ಹೋರಾಟ…!!!

Spread the love

ಧಾರವಾಡ ಮರಾಠಾ ವಿದ್ಯಾ ಪ್ರಸಾರಕ ಮಂಡಳ (ರಿ) 13/08/2023 ನಡೆದ ಚುನಾವಣೆಯಲ್ಲಿ ನಡೆದ ಅಕ್ರಮವನ್ನು ತನಿಖೆ ಮಾಡಿ ಮರು ಚುನಾವಣೆ ಮಾಡಲು ಆಗ್ರಹ

ಧಾರವಾಡ: ಮರಾಠಾ ವಿದ್ಯಾ ಪ್ರಸಾರಕ ಮಂಡಳದಲ್ಲಿ 13/08/2023 ರಂದು ನಡೆದ ಚುನಾವಣೆಯಲ್ಲಿ ಅನೇಕ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.

ಸದಸ್ಯರಯಾದಿ ಪಟ್ಟಿಯಲ್ಲಿ ಮರಣಹೊಂದಿದ ಹಾಗೂ ಹೊಸ ಸದಸ್ಯರ ಸದಸ್ಯತ್ವದಲ್ಲಿ ಅನೇಕ ಲೋಪದೋಷ ಕಂಡು ಬಂದಿವೆ. ಇದರ ಬಗ್ಗೆ ಸಮಾಜದ ಪ್ರಮುಖರು ಹತ್ತು ಹಲವಾರು ಬಾರಿ ಚುನಾವಣೆ ಅಧಿಕಾರಿಗಳಿಗೆ ಮತ್ತು ಚುನಾವಣೆ ಸಲಹಾ ಸಮಿತಿಯ ಪಧಾದಿಕಾರಿಗಳಿಗೆ ಲಿಖಿತ ತಕರಾರು ಸಲ್ಲಿಸಿದ್ದರೂ ಯಾವುದೇ ಉತ್ತರ ಕೊಟ್ಟಿರುವುದಿಲ್ಲ ಎಂದರು.

ಚುನಾವಣೆ ಅಧಿಕಾರಿ ಹಾಗೂ ಚುನಾವಣೆ ಸಲಹಾ ಸಮಿತಿಯ ಪದಾಧಿಕಾರಿಗಳು ಹಾಲಿ ಆಡಳಿತ ಮಂಡಳದ ಜೊತೆ, ಮಿಲಾಪಿಯಾಗಿ ಮತದಾನದ ವೇಳೆಯಲ್ಲಿ ಮರಣಹೊಂದಿ ಸದಸ್ಯರ ಮತದಾನ ಮಾಡಿಸಿ ಹಾಗೂ ಖೋಟ್ಟಿ ಮತದಾನ ಮಾಡಿದ ಪರಿಣಾಮದಿಂದ ಮತ ಸಂಖ್ಯೆಗೂ ಮತ್ತು ಮತ ಪತ್ರಗಳ ಸಂಖ್ಯೆಗೂ ಹೊಂದಾಣಿಕೆಯಾಗಿರುವುದಿಲ್ಲ ಎಂದರು. ಚುನಾವಣಾಧಿಕಾರಿಗಳು ಮತದಾನ ಪತ್ರಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಬಹಿರಂಗವಾಗಿ ಮತ ಪತ್ರಗಳನ್ನು ಇಟ್ಟಿದು ಕಂಡು ಬಂದಿರುತ್ತದೆ. ಈ ಮತ ಪತ್ರಗಳನ್ನು ಚುನಾವಣೆ ಅಧಿಕಾರಿ ಯಾವುದೇ ರೀತಿಯಿಂದ ಸಿಲ್ ಮಾಡದೇ, ಬಹಿರಂಗವಾಗಿ ಇಟ್ಟಿರುತ್ತಾರೆ, ಇದು ಕಾನೂನು ಬಾಹಿರವಾಗಿರುತ್ತದೆ. ಅದೆ ರೀತಿ ಚುನಾವಣೆಗೆ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಪಡೆದ ಮತಗಳ ಬಗ್ಗೆ ಘೋಷಣೆ ಮಾಡದೇ, ದಿನಾಂಕ 16/08/2023 ರಂದು ಚುನಾವಣೆ ಅಧಿಕಾರಿಯು ಗೆದ್ದಂತಹ ಪ್ರತಿನಿಧಿಗೆ ಚುನಾವಣಾ ಅಧಿಕಾರಿ ಅಧಿಕೃತವಾಗಿ ಪ್ರಮಾಣ ಪತ್ರ ನೀಡಬೇಕಾಗಿತ್ತು. ಅದರೆ ಹಾಲಿ ಆಡಳಿತ ಮಂಡಳಿಯು ಮುಚ್ಚಿದ ಬಾಗಿಲಿನಲ್ಲಿ ಪ್ರಮಾಣ ಪತ್ರಗಳನ್ನು ತಮ್ಮಷ್ಟಕ್ಕೆ ತಾವೇ ಹಂಚಿಕೊಂಡಿದ್ದಾರೆ ಎಂದು ದೂರಿದರು.

ದಿನ ವಿದ್ಯಾ ಪ್ರಸಾರಕ ಮಂಡಳದ ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ಮಾಡಿ ಚುನಾವಣೆ ಅಧಿಕಾರಿ ಹಾಗೂ ಚುನಾವಣೆ ಸಲಹಾ ಸಮಿತಿಯ ಪದಾಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಸಮ್ಮತ ಮರು ಚುನಾವಣೆ ಮಾಡಬೇಕೆಂದು ಮರಾಠಾ ಸಮಾಜ ಆಗ್ರಹಿಸಿದ್ದಾರೆ. ನಾರಾಯಣ ಹುಬ್ಬಳ್ಳಿ, ವಿಜಯ ಭೋಸಲೆ, ನವೀನ ಕದಮ್, ಬಸವರಾಜ ಜಾಧವ, ರಾಜೇಶ ಜಾಧವ, ಮಂಜುನಾಥ ಜಾಧವ, ಕಿರಣ ಭೋಸಲೆ ಮುಂತಾದವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *