Posts Slider

Karnataka Voice

Latest Kannada News

ಜೊತೆಗಾರನಿಗೆ “ಚಾಕು ಹಾಕಿ” ಹುಬ್ಬಳ್ಳಿಯ ಠಾಣೆ.. ಠಾಣೆ ಅಲೆದಾಡಿದ ದೂರ್ತ…!!!

1 min read
Spread the love

ಹುಬ್ಬಳ್ಳಿ: ತನ್ನೊಂದಿಗೆ ಬಂದಿದ್ದವನಿಗೆ ಚಾಕು ಇರಿದು ಹತ್ಯೆ ಮಾಡಿದ್ದಾಗಿ ಹೇಳಿ ಠಾಣೆ ಠಾಣೆಗೆ ದೂರ್ತನೋರ್ವ ಅಲೆದಾಡಿದ ಘಟನೆ ವಾಣಿಜ್ಯನಗರಿಯಲ್ಲಿ ನಡೆದಿದ್ದು, ಚಾಕು ಇರಿತಕ್ಕೊಳಗಾದವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಪರಶುರಾಮ ಎಂಬಾತನನ್ನ ಯುವರಾಜ ಎಂಬಾತ ಚಾಕುವಿನಿಂದ ಎಲ್ಲೆಂದರಲ್ಲಿ ಇರಿದಿದ್ದಾನೆ. ಕುಡಿತ ಮತ್ತಿನಲ್ಲಿ ಪರಶುರಾಮ ಸತ್ತೆ ಹೋದನೆಂದು ತಿಳಿದುಕೊಂಡು, ಬೈಕಿನಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಬಳಿ ಬೈಕ್ ನಿಲ್ಲಿಸಿ, ಹಳೇಹುಬ್ಬಳ್ಳಿ ಠಾಣೆಗೆ ಬಂದು ‘ತಾನು ಕೊಲೆ ಮಾಡಿ ಬಂದಿದ್ದೇನೆ’ ಎಂದು ಹೇಳಿಕೊಂಡಿದ್ದಾನೆ.

ತಕ್ಷಣವೇ ಜಾಗೃತರಾದ ಪೊಲೀಸರು ವಿಚಾರಣೆ ಮಾಡಿದಾಗ ಅದು ಅವರ ವ್ಯಾಪ್ತಿಗೆ ಬರಲ್ಲವೆಂದು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಾಕು ಹಾಕಿದಾತನೇ ಗಾಯಾಳುವಿನ ಮೊಬೈಲ್ ನಂಬರ ನೀಡಿದ್ದಾನೆ.

ಇದೇ ಸಮಯದಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಪರಶುರಾಮನನ್ನ ಕಿಮ್ಸಗೆ ದಾಖಲು ಮಾಡಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed