Posts Slider

Karnataka Voice

Latest Kannada News

ವಿಜಯೇಂದ್ರ ಅವರೇ, ನಿಮ್ಮ ಹೇಳಿಕೆಗೆ ನಗಬೇಕೋ.. ಅಳಬೇಕೋ: ಪಂಚ್ ಕೊಟ್ಟ ಪಿ.ಎಚ್.ನೀರಲಕೇರಿ…

Spread the love

ಧಾರವಾಡ: ರಾಜ್ಯದಲ್ಲಿನ ಸಿದ್ಧರಾಮಯ್ಯ ನೇತೃತ್ವದ ಸರಕಾರದ ವರ್ಚಸ್ಸು ಕಡಿಮೆಯಾಗಿದೆ ಎಂದು ಹೇಳಿಕೆ ನೀಡಿರುವ ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಕೆಪಿಸಿಸಿ ವಕ್ತಾರ ಪಿ.ಎಚ್.ನೀರಲಕೇರಿ ಟಾಂಗ್ ಕೊಟ್ಟಿದ್ದಾರೆ.

ನೀರಲಕೇರಿಯವರ ಹೇಳಿಕೆ..

ಮಾನ್ಯ ಬಿವೈ ವಿಜಯೇಂದ್ರ ಅವರೇ ನಿಮ್ಮ ಈ ಹೇಳಿಕೆಗೆ ನಗಬೇಕೊ? ಅಳಬೇಕೊ ಒಂದೂ ತಿಳಿಯುತ್ತಿಲ್ಲ. ಮೂರೇ ತಿಂಗಳಲ್ಲಿ ಸಿದ್ದು ಸರ್ಕಾರದ ವರ್ಚಸ್ಸು ಕಡಿಮೆ ಆಗಿದೆ ಎಂದು ಹೇಳಿದ್ದಿರಿ. ನಿಜ ಏನೆಂದರೆ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಬಂದು ಮೂರೇ ತಿಂಗಳಲ್ಲಿ ಬಿಜೆಪಿ ಇದ್ದ ಅಲ್ಪಸ್ವಲ್ಪ ವರ್ಚಸ್ಸನ್ನು ಕಳೆದುಕೊಂಡು ಸೋತು ಸೊರಗಿ ಹೋಗಿದೆ.
ಏಕೆಂದರೆ ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಮ್ಮನ್ನು ಅಷ್ಟು ಘಾಸಿಗೊಳಿಸಿವೆ. ಜನಕ್ಕೆ ಸತ್ಯ ಅರಿವಾಗಿದೆ. ಬಡವರ, ನೊಂದವರ ಪರವಾಗಿರುವ ಯಶಸ್ವಿ ಸರ್ಕಾರದ ಜನಪ್ರಿಯತೆಯನ್ನು ನಿಮಗೆ ಸಹಿಸಿಕೊಲ್ಳಲಾಗದೇ ಈ ರೀತಿ ಹೇಳಿಕೆಗಳನ್ನು ಕೊಡುತ್ತಿರಿ. ಬಿಜೆಪಿ ಸರಕಾರ ಖಾಲಿ ಖಜಾನೆ ಬಿಟ್ಟು ಹೋಗಿದ್ದು ನಿಮಗೆ ವಿಶೇಷ ಹೇಳಬೇಕಿಲ್ಲ, ಕಾಂಗ್ರೆಸ್ಸ್ ಸರಕಾರದ ಜನಕಲ್ಯಾಣ ಯೋಜನೆ ವಿರೋಧಿಸದೆ ನೀವೂ ಸಹಕರಿಸಿ.ಲೋಕಸಭಾ ಚುನಾವಣೆಗೆ ಜನರ ಗಮನ ಸೆಳೆಯಲು ಹೀಗೆ ಹೇಳುತ್ತಿರುವದು ಸರಿಯಲ್ಲ. ಆದರೆ, ಅದೇ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ನಿಜವಾದ ವರ್ಚಸ್ಸು ಗೊತ್ತಾಗಲಿದೆ..!

-ಪಿ.ಎಚ್.ನೀರಲಕೇರಿ
ಕೆಪಿಸಿಸಿ ವಕ್ತಾರ
ಧಾರವಾಡ


Spread the love

Leave a Reply

Your email address will not be published. Required fields are marked *