ಕುಂದಗೋಳ: “ಸಂಬಾಳಸ್ತಾನ್” ಅನ್ಕೊಂಡು ಸೆಕ್ರೆಟರಿಗೆ ‘3’ ಗ್ರಾಪಂಗೆ PDO ಉಸ್ತುವಾರಿ…!!!

ಕುಂದಗೋಳ: ಗ್ರಾಮ ಪಂಚಾಯತಿಯಲ್ಲಿ ಸೆಕ್ರೆಟರಿ ಆಗಿರುವ ಓರ್ವರನ್ನ ಮೂರು ಗ್ರಾಮ ಪಂಚಾಯತಿಗಳಿಗೆ ಪಿಡಿಓಯನ್ನಾಗಿ ಮಾಡಿರುವ ಸಮಯದಲ್ಲಿಯೇ, ಆತ ಹಿರಿಯ ಅಧಿಕಾರಿಗಳಿಗೆ ಹಾಗೀಗೆ ಮಾತಾಡಿದ ಹಿನ್ನೆಲೆಯಲ್ಲಿ ‘ಕಾರಣ ಕೇಳಿ ನೋಟೀಸ್’ ನೀಡಲಾಗಿದೆ.
ಯು.ಸಿ.ತುಪ್ಪದಗೌಡರ ಎಂಬ ಸೆಕ್ರೆಟರಿ ಅವರಿಗೆ ಮೂರು ಪಂಚಾಯತಿಗಳಿಗೆ ಪಿಡಿಓ ಮಾಡಲಾಗಿದೆ. ಈ ಬಗ್ಗೆ ಇಓ ಕುರಿಯವರನ್ನ ಕೇಳಿದಾಗ ಆತ ಸಂಬಾಳಿಸುತ್ತಾನೆ ಅಂದುಕೊಂಡು ಕೊಟ್ಟಿದ್ದೇವೆ ಅಂತಾರೆ.
ಆದರೆ, ಇದೇ ಯು.ಸಿ.ತುಪ್ಪದಗೌಡರ, ಕಳೆದ ಮೂರು ದಿನಗಳ ವಾಟರ್ ಸಪ್ಲೈ ಎಕ್ಸಿಕ್ಯುಟಿವ್ ಇಂಜಿನಿಯರ್ ಸೊಪ್ಪಿಮಠ ಅವರಿಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಅದಕ್ಕೆ ಹಿರಿಯ ಅಧಿಕಾರಿ ಮಾನಸಿಕವಾಗಿ ಬೇಸರಗೊಂಡಿದ್ದರು.
ಅವತ್ತಿನ ವೀಡಿಯೋ…
ಈಗ ಮೂರು ಗ್ರಾಪಂಗಳಿಗೆ ಪಿಡಿಓ ಆಗಿರುವ ಯು.ಸಿ. ತುಪ್ಪದಗೌಡರಿಗೆ ಕಾಟಾಚಾರದ ನೋಟೀಸ್ ನೀಡಲಾಗಿದೇಯಾ. ಧಾರವಾಡದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಈ ಬಗ್ಗೆ ಗಮನ ಹರಿಸಬೇಕಿದೆ.
ಸೆಕ್ರೆಟರಿ ಇದ್ದವರನ್ನ ಮೂರ್ನೂರು ಪಂಚಾಯತಿಗಳಿಗೆ ಪಿಡಿಓ ಮಾಡುವ ಹಿಂದಿರುವ ದುರದ್ದೇಶ ಏನಿರಬಹುದು ಎಂಬುದರ ತನಿಖೆ ನಡೆಯಬೇಕಿದೆ. ಅಷ್ಟೇ ಅಲ್ಲ, ವೆಟರ್ನರಿಯ ಕುರಿಯವರು ಇಓ ಆಗಿರುವ ಬಗ್ಗೆಯೂ ಪ್ರಜ್ಞಾವಂತ ಸಚಿವ ಸಂತೋಷ ಲಾಡ, ಅರಿತು ಸರಕಾರದ ಗೌರವ ಹೆಚ್ಚಿಸಬೇಕಿದೆ.