ಧಾರವಾಡ: ಬಿಜೆಪಿ ಹೋರಾಟಕ್ಕೆ “ಬೆಂಕಿ” ಪ್ರತಿಷ್ಠೆ- ಪಿಎಸ್ಐ ಮೇಲೆ ಆಕ್ರೋಶ….

ರಾಜ್ಯ ಸರಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಹೋರಾಟ
ಟೈರ್ ಬೆಂಕಿಗಾಗಿ ಬದಲಾದ ಹೋರಾಟದ ಉದ್ದೇಶ
ಧಾರವಾಡ: ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ರೈತ ವಿರೋಧಿ ನೀತಿಯನ್ನ ಅನುಸರಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿಯ ರೈತ ಮೋರ್ಚಾ ನಡೆಸುತ್ತಿದ್ದ ಹೋರಾಟ ‘ಬೆಂಕಿ’ಗಾಗಿ ಕೆಲ ಸಮಯ ಗೊಂದಲವುಂಟಾದ ಘಟನೆ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದೆ.
ಹೋರಾಟದ ಮೊದಲ ಉದ್ದೇಶ ಮರೆತ ಬಿಜೆಪಿ ಪ್ರಮುಖರು, ಜಿಲ್ಲಾಧಿಕಾರಿಗೆ ಪಿಎಸ್ಐ ಬಗ್ಗೆ ದೂರು ಹೇಳಲು ಮುಂದಾಗಿದ್ದು ಕಂಡು ಬಂದಿತು.
ವೀಡಿಯೋ..
ಬಿಜೆಪಿ ಸರಕಾರವಿದ್ದಾಗ ರೈತರ ಪರವಾಗಿದ್ದ ಯೋಜನೆಗಳನ್ನ ಕೈ ಬಿಡಲಾಗಿದೆ. ಅವುಗಳನ್ನ ಆರಂಭಿಸುವಂತೆ ಆಗ್ರಹಿಸಿದರು.