ಧಾರವಾಡ ಜಿಲ್ಲಾ ಪತ್ರಕರ್ತ ಸಂಘಕ್ಕೆ “ವಿಜಯ ಹೂಗಾರ” ಉಪಾಧ್ಯಕ್ಷರಾಗಿ ನೇಮಕ…

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಹಿರಿಯ ಪತ್ರಕರ್ತ ವಿಜಯ ಹೂಗಾರ ಅವರನ್ನ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಅಧಿಕೃತ ಆದೇಶವನ್ನ ಜಿಲ್ಲಾಧ್ಯಕ್ಷರು ಹೊರಡಿಸಿದ್ದಾರೆ.
ಬಿ.ಎನ್.ನಾಗರಾಜ, ಮಂಜುನಾಥ ಅಂಗಡಿ ಹಾಗೂ ಪಿ.ಶೇಖರ ಅವರನ್ನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಸಂಘದಲ್ಲಿ ಖಾಲಿಯಾದ ನಾಲ್ಕು ಸ್ಥಾನಗಳಿಗೆ ಸಂಘವೂ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಹಿರಿಯ ಪತ್ರಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.