ಜಂಗಮ ಪ್ರಶಾಂತ ದೇವರು “ಪುರಪ್ರವೇಶ”- ವೀರಶೈವ ಲಿಂಗಾಯತ ಪಂಚಮಸಾಲಿ ಒಕ್ಕೂಟಕ್ಕೆ ಹಿನ್ನೆಡೆ…

ಧಾರವಾಡ: ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟದ ವಿರೋಧದ ಮಧ್ಯೆಯೂ ಗರಗ ಮಡಿವಾಳೇಶ್ವರ ಕಲ್ಮಠದ ಭಾವಿ ಪೀಠಾಧಿಪತಿಯವರು ಗರಗ ಗ್ರಾಮಕ್ಕೆ ಪುರಪ್ರವೇಶ ಮಾಡಿದರು.
ಗರಗ ಮಡಿವಾಳೇಶ್ವರ ಕಲ್ಮಠದ ಭಾವಿ ಪೀಠಾಧಿಪತಿಗಳಾದ ಶ್ರೀ ಪ್ರಶಾಂತ ದೇವರು ಪ್ರವೇಶವಾಗುತ್ತಿದ್ದ ಹಾಗೇ ಭಕ್ತಾಧಿಗಳು ಆದರದಿಂದ ಸ್ವಾಗತಿಸಿ, ಮೆರವಣಿಗೆ ಮೂಲಕ ಮಠಕ್ಕೆ ಕರೆದುಕೊಂಡು ಹೋದರು.
ವೀಡಿಯೋ..
ಪ್ರಶಾಂತ ದೇವರ ಪಟ್ಟಕ್ಕೆ ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟ ನಿನ್ನೆ ಪ್ರತಿಭಟಿಸಿದ್ದರು. ಜಂಗಮ ಸಮಾಜದವರನ್ನ ಶ್ರೀ ಮಠಕ್ಕೆ ತರದಂತೆ ಒತ್ತಾಯಿಸಿದ್ದರು.