Exclusive ಬಿಆರ್ಟಿಎಸ್ “ಚಿಗರಿ ಬಸ್”ಲ್ಲಿ ಬೆಂಕಿ: ತಪ್ಪಿದ ದುರಂತ…

Breking
ಚಿಗರಿ ಬಸ್ ಗೆ ಹತ್ತಿದ ಬೆಂಕಿ; ತಪ್ಪಿದ ಬಾರಿ ದುರಂತ
ಹುಬ್ಬಳ್ಳಿ: ಚಲಿಸುತ್ತಿದ್ದ ಚಿಗರಿ ಬಸ್ ಗೇ ಬೆಂಕಿ ಹತ್ತಿದ ಪರಿಣಾಮ ನಡೆಯಬಹುದಾದಂತ ದೊಡ್ಡ ದುರಂತ ಒಂದು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಮಹಾನಗರ ಪಾಲಿಕೆಯ ಮುಂಬಾಗದಲ್ಲಿ ಈಗಷ್ಟೇ ನಡೆದಿದೆ.
ಧಾರವಾಡ ದಿಂದ ಹುಬ್ಬಳ್ಳಿಗೆ ಬಂದ ಚಿಗರಿ ಬಸ್ ಚಕ್ರಕ್ಕೆ ಮಹಾನಗರ ಪಾಲಿಕೆಯ ಮುಂಭಾಗದಲ್ಲಿಯೇ ಬೆಂಕಿ ಹೊತ್ತಿಕೊಂಡಿದೆ, ಇದನ್ನು ನೋಡಿದ ಬೇರೆ ವಾಹನದಲ್ಲಿದ್ದ ಪ್ರಯಾಣಿಕರು ಚಿಗರಿ ಬಸ್ ನ ಚಾಲಕನಿಗೆ ಹೇಳಿದ ಕೂಡಲೇ ಚಿಗರಿ ಬಸ್ ನಿಲ್ಲಿಸಿ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಚಿಗರಿ ಬಸ್ ಗೆ ಹತ್ತಿದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ, ಒಟ್ಟಿನಲ್ಲಿ ಚಿಗರಿ ಬಸ್ ನಲ್ಲಿ ದಿನಂಪ್ರತಿ ಒಂದಿಲ್ಲೊಂದು ದುರಂತ ನಡೆಯುತ್ತಿದ್ದು ಈ ಚಿಗರಿ ಹುಬ್ಬಳ್ಳಿಗೆ ಬೇಕಿತ್ತಾ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.