ಕರ್ನಾಟಕದ “ಅಪರೂಪದ ಕಂಡಕ್ಟರ್”- ನೀವೆಂದೂ ನೋಡದ ವೀಡಿಯೋ ಇಲ್ಲಿದೆ….
1 min readಕಾಂಗ್ರೆಸ್ ಸರಕಾರದ ಯೋಜನೆಯ ಹೆಗ್ಗಳಿಕೆ
ಮಹಿಳೆಯರಿಗೆ ವಿಭಿನ್ನವಾಗಿ ತಿಳಿಸುವ ಯತ್ನ
ಸಿಎಂ ಸಿದ್ಧರಾಮಯ್ಯನವರು ನೋಡಲೇಬೇಕು
ರಾಯಚೂರು: ರಾಜ್ಯ ಸರಕಾರದ ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣವನ್ನ ಮಹಿಳೆಯರಿಗೆ ನೀಡುವ ಜೊತೆಗೆ ಅದನ್ನ ಅಪರೂಪದ ನಿರ್ವಾಹಕರೋರ್ವರು ವಿಭಿನ್ನವಾಗಿ ಅನುಷ್ಠಾನ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಅಪರೂಪದ ಕಂಡಕ್ಟರ್ ವಿಶೇಷ ವೀಡಿಯೋ ಇಲ್ಲಿದೆ ನೋಡಿ..
ಗುರು ದೇವರಮನಿ ಎಂಬ ನಿರ್ವಾಹಕರು ತಮ್ಮದೇ ಶೈಲಿಯಲ್ಲಿ ಆಕರ್ಷಣೆ ಕೇಂದ್ರ ಬಿಂದುವಾಗಿದ್ದಾರೆ. ಡಾ.ರಾಜಕುಮಾರ ಅವರ ಹಾಡೊಂದರ ಸಾಲಿನಲ್ಲಿ ತಮ್ಮ ಸಾಲುಗಳನ್ನ ಸೇರಿಸಿ, ಪ್ರಯಾಣಿಕರಿಗೆ ತಿಳುವಳಿಕೆ ಜೊತೆಗೆ ಮನೋರಂಜನೆ ನೀಡುತ್ತಿರುವುದು ವಿಶೇಷವಾಗಿದೆ.