Posts Slider

Karnataka Voice

Latest Kannada News

ಕಲಘಟಗಿಯ ಸಂಜೀವಿನಿಯಾಗಿದ್ದ ಡಾ.ಹನಮಂತಗೌಡ ಪಾಟೀಲ ಇನ್ನಿಲ್ಲ…

Spread the love

ಧಾರವಾಡ: ಬಡಜನರ ಪಾಲಿನ ಸಂಜೀವಿನಿಯಾಗಿದ್ದ ಡಾ.ಹನಮಂತಗೌಡ ಪಾಟೀಲ ಅವರು ಕಲಘಟಗಿಯಲ್ಲಿ ನಿಧನರಾಗಿದ್ದು, ಇಡೀ ತಾಲೂಕಿನ ಆರೋಗ್ಯವೇ ಕುಸಿದಂತಾಗಿದೆ.

ಡಾ.ಹನಮಂತಗೌಡ ಬಸನಗೌಡ ಪಾಟೀಲ ಅವರು ಪ್ರೋಗ್ರೇಸಿವ್ ಎಜ್ಯುಕೇಷನ್ ಸೊಸೈಟಿಯ ಸ್ಥಾಪಕರು ಆಗಿದ್ದರು. ಅವರ ನಿಧನದಿಂದ ಸಾವಿರಾರೂ ಜನರು ದುಃಖತಪ್ತರಾಗಿದ್ದಾರೆ.

ಡಾ.ಹನಮಂತಗೌಡ ಅವರು, ಬಡವರ ದೀನದಲಿತರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕಲಘಟಗಿ ತಾಲೂಕಿನ ಪ್ರತಿ ಮನೆಗೂ ಪರಿಚಿತರಾಗಿದ್ದರು. ಅವರ ನಿರ್ಗಮನ ಜನರಲ್ಲಿ ನೋವನ್ನುಂಟು ಮಾಡಿದೆ.

ಡಾ.ಹನಮಂತಗೌಡರ ಅಂತ್ಯಕ್ರಿಯೆ ಸಂಜೆ ಆರು ಗಂಟೆಗೆ ನಡೆಯಲಿದೆ.

ಸಚಿವ ಸಂತೋಷ ಲಾಡ ಕಂಬನಿ: ಡಾ.ಹನಮಂತಗೌಡ ಪಾಟೀಲ ಅವರ ನಿಧನದಿಂದ ಅಪಾರ ನೋವಾಗಿದೆ. ಅವರ ಕುಟುಂಬದ ಜೊತೆಗೆ ಸದಾಕಾಲ ನಾನು ಜೊತೆಗಿರುವೆ. ಅವರ ನೋವಿನಲ್ಲಿ ನಾನೂ ಭಾಗಿ. ಡಾ. ಹನಮಂತಗೌಡರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

 


Spread the love

Leave a Reply

Your email address will not be published. Required fields are marked *