ಮಾಜಿ ಸಚಿವ ವಿನಯ ಕುಲಕರ್ಣಿ ನಿವಾಸಕ್ಕೆ ಅನಾಮಧೇಯ ಪತ್ರ….!!!

ಧಾರವಾಡ: ನಗರದ ಬಾರಾಕೋಟ್ರಿ ಪ್ರದೇಶದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ನಿವಾಸಕ್ಕೆ ಅನಾಮಧೇಯ ಪತ್ರಗಳು ಬರುತ್ತಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ದೂರು ನೀಡಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದಾರೆ.
ಅನಾಮಧೇಯ ಪತ್ರದಲ್ಲಿ ಏನೇನು ಬರೆಯಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಗೆ ಬಿದ್ದಿಲ್ಲ. ಆದರೆ, ಪತ್ರದ ಬಗ್ಗೆ ನಾಳೆ ಧಾರವಾಡದ ಉಪನಗರ ಠಾಣೆಗೆ ದೂರು ನೀಡಲು ಮುಂದಾಗಿರುವ ಕಾರ್ಯಕರ್ತರು, ನಾಳೆಗೆ ಠಾಣೆಗೆ ಬರುವಂತೆ ಕೋರಿದ್ದಾರೆ.