Karnataka Voice

Latest Kannada News

ಬಿಜೆಪಿಗೆ ಸಂತೋಷ ಲಾಡ “ರೂಮರ್ ಹಬ್ಬಿಸಿ” ಲಾಭ ಪಡೆಯಲು ಮುಂದಾಯ್ತಾ ಬಿಜೆಪಿ…!!!

ಧಾರವಾಡ: ಕಲಘಟಗಿ ಕ್ಷೇತ್ರದಿಂದ ಈ ಬಾರಿ ಮಾಜಿ ಸಚಿವ ಸಂತೋಷ ಲಾಡ ಅವರ ಗೆಲುವನ್ನ ತಪ್ಪಿಸಲು ಸಾಧ್ಯವಿಲ್ಲ ಎಂಬುದು ಗೊತ್ತಾಗಿದ್ದರಿಂದ ಬಿಜೆಪಿಯ ಕೆಲವರು ‘ಸಂತೋಷ ಲಾಡ ಅವರೇ ಬಿಜೆಪಿಗೆ’ ಬರುತ್ತಾರೆಂಬ ವದಂತಿ ಹಬ್ಬಿಸುವ ಮೂಲಕ ಅಸಹ್ಯಕರ ರಾಜಕಾರಣಕ್ಕೆ ಮುಂದಾಗಿದ್ದಾರೆಂದು ಕಾಂಗ್ರೆಸ್ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಕಲಘಟಗಿ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ನಡೆಸಿರುವ ಸರ್ವೆಯಲ್ಲಿಯೂ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಗೊತ್ತಾಗಿದ್ದರಿಂದ ಇಂತಹ ಅಸಹ್ಯ ರಾಜಕಾರಣ ಮಾಡಲು ಕೆಲವು ಅಪ್ರಜ್ಞಾವಂತರು ಪ್ರಯತ್ನ ಮಾಡುತ್ತಿದ್ದಾರೆ.

ಇಂತಹ ಕುಕೃತ್ಯ ನಡೆಸಲು ಕಾಂಗ್ರೆಸ್‌ನ “ಅಂಕು-ಡೊಂಕಿನ” ಜನರು ಪ್ರಯತ್ನ ನಡೆಸುತ್ತಿರುವುದು ಕೂಡಾ ಕಂಡು ಬರುತ್ತಿದೆ ಎಂಬುದನ್ನ ಸಂತೋಷ ಲಾಡ‌ ಆಪ್ತ ಬಳಗ ಗೊತ್ತು ಮಾಡಿಕೊಂಡಿದೆ.

Leave a Reply

Your email address will not be published. Required fields are marked *