ಧಾರವಾಡದ “ಹತ್ಯೆ-ಆತ್ಮಹತ್ಯೆ” ಇನಿಯನಿಂದ ‘161’ ಮಾಡಿದ್ನಾ ಡಬಲ್ಸ್ಟಾರ್…

ಧಾರವಾಡ: ಗಂಡ ಸತ್ತವಳ ಜೊತೆ ಸಂಬಂಧವಿಟ್ಟುಕೊಂಡು, ಆಕೆ ಬೇರೆಯವನ ಜೊತೆ ಅನೈತಿಕ ಬೆಳೆಸಿಕೊಂಡಿದ್ದಾಳೆಂದು ಆಕೆಯನ್ನ ನಡು ರಸ್ತೆಯಲ್ಲಿ ಹತ್ಯೆ ಮಾಡಿ, ಪೊಲೀಸರಿಗೆ ಸಿಕ್ಕು ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾದ ಪ್ರಕರಣದಲ್ಲಿ ‘ತೆರೆಮರೆ’ ಹಣದ ವ್ಯವಹಾರವನ್ನ ಮೇಧಾವಿ ಡಬಲ್ ಸ್ಟಾರ್ವೊಬ್ಬರು ಮಾಡಿದ್ದಾರೆಂಬ ಗುಲ್ಲು ಮಾನಸಿಕ ಆಸ್ಪತ್ರೆಯ ಮುಂಭಾಗದಲ್ಲಿ ಹಬ್ಬಿದೆ.

ಧಾರವಾಡ ನೆಹರುನಗರದ ಸವಿತಾ ಎಂಬಾಕೆ ವಿಧವೆಯಾದ ನಂತರ ಆನಂದನ ಜೊತೆಯಿದ್ದಳು. ಆದರೆ, ಆಕೆ ಮತ್ತೋರ್ವ ಉಮೇಶ (ಹೆಸರು ಬದಲಾಯಿಸಲಾಗಿದೆ) ಸಂಬಂಧ ಹೊಂದಿದ್ದಾಳೆಂದು ಭಾವಿಸಿ ಸಿವಿಲ್ ಆಸ್ಪತ್ರೆಯ ಬಳಿ ಹತ್ಯೆ ಮಾಡಿದ್ದ. ತದನಂತರ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದರು.

ಜೈಲಿಗೆ ಹೋಗಿ ಎರಡೇ ದಿನದಲ್ಲಿ ನೇಣಿಗೆ ಕೊರಳೊಡ್ಡಿ ಸಾವಿಗೀಡಾಗಿದ್ದ. ಆದರೆ, ಅಸಲಿ ಆಟವನ್ನ ಕೆಲವರು ಆಗ ಆರಂಭಿಸಿದ್ದರು. ಸವಿತಾಳ ಜೊತೆ ವಯಕ್ತಿಕ ಸಂಬಂಧ ಹೊಂದಿದವನ ಹಿಂದೆ ಬಿದ್ದು, ಒಂದು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು, ಆತನ ಅಳಿಯನ ಮೂಲಕ ನಲ್ವತ್ತು ಸಾವಿರ ಪಡೆದು ಸುಮ್ಮನಾಗಿದ್ದಾರೆಂಬ ವದಂತಿ ಹಬ್ಬಿದೆ. ಪಾಪ… ಈ ಬಾರಿಯ ದೀಪಾವಳಿಗೆ ಇದೇ ಹಣವನ್ನೇ ಖರ್ಚು ಮಾಡಿರಬೇಕು ಅನಿಸತ್ತೆ… ಛೀ…