Karnataka Voice

Latest Kannada News

ಧಾರವಾಡದಲ್ಲಿ “ಆಕೆಯನ್ನ” ತಲ್ವಾರನಿಂದ ಹತ್ಯೆ ಮಾಡಿದ್ದ “ಆನಂದ” ಪತ್ತೆ…

ಧಾರವಾಡ: ಪತಿಯನ್ನ ಕಳೆದುಕೊಂಡು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನ ಆಕೆಯನ್ನ ಹಚ್ಚಿಕೊಂಡಿದ್ದವನೇ ಹತ್ಯೆ ಮಾಡಿರುವ ಪ್ರಕರಣವನ್ನ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡ ನೆಹರುನಗರದ ನಿವಾಸಿಯಾಗಿದ್ದ ಸವಿತಾ ಕಿತ್ತೂರು ಎಂಬಾಕೆ ತನ್ನ ಗಂಡನ ಸಾವಿನ ನಂತರ ಆನಂದ ದುಧನಿ ಎಂಬಾತನ ಜೊತೆ ಸಂಪರ್ಕ ಹೊಂದಿದ್ದಳು. ಇದೇ ಕಾರಣಕ್ಕೆ ಆನಂದ ಆಕೆಗೆ ಹಣವನ್ನೂ ನೀಡಿದ್ದ.

ಕೆಲವು ದಿನಗಳ ನಂತರ ಸವಿತಾ ಬೇರೆಯವರ ಜೊತೆ ಸಂಬಂಧ ಬೆಳೆಸಿದ್ದಾಳೆಂದು ತಿಳಿದುಕೊಂಡ ಆನಂದ ಆಕೆಯನ್ನ ಕರೆದುಕೊಂಡು ಬಂದು ತಲ್ವಾರನಿಂದ ಹೊಡೆದು ಪರಾರಿಯಾಗಿದ್ದ.

ಪ್ರಕರಣ ದಾಖಲು ಮಾಡಿಕೊಂಡಿದ್ದ ಉಪನಗರ ಠಾಣೆ ಪೊಲೀಸರು ಆನಂದ ದುಧನಿಯನ್ನ ಬಂಧಿಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.

Leave a Reply

Your email address will not be published. Required fields are marked *