Karnataka Voice

Latest Kannada News

ವೇದಿಕೆಯಲ್ಲಿ ಇರಲಿದ್ದಾರೆ “ಮಾಜಿ ಸಿಎಂ JS”- ಷಡ್ಯಂತ್ರ…

ಹುಬ್ಬಳ್ಳಿ: ಮಹಾನಗರ ಪಾಲಿಕೆಯಿಂದ ಹುಬ್ಬಳ್ಳಿಯ ಜಿಮಖಾನಾ ಮೈದಾನದಲ್ಲಿ ನಡೆಯಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪೌರ ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ ಅವರಿಗೆ ಅವಕಾಶ ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪ್ರತಿನಿಧಿಸುವ ಸೆಂಟ್ರಲ್ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೂ, ಅವರನ್ನ ವೇದಿಕೆಯಿಂದ ದೂರವಿಡುವ ಷಡ್ಯಂತ್ರ ನಡೆದಿತ್ತು. ಪಕ್ಷವನ್ನ ಪ್ರೀತಿಸುವ ಹಲವರ ಒತ್ತಾಯದಿಂದ ಮತ್ತೆ ಅದು ಸರಿಯಾಗಿದೆ.

ಬಿಜೆಪಿಯ ಅಧಿಕಾರವಿದ್ದ ಸಮಯದಲ್ಲಿ ನಡೆಯುತ್ತಿರುವ ಪ್ರಮುಖ ಕಾರ್ಯಕ್ರಮದಲ್ಲಿಯೇ ಜಗದೀಶ ಶೆಟ್ಟರ ಅವರಿಗೆ ತೊಂದರೆ ಕೊಡುವ ಯತ್ನ ನಡೆದಿರುವುದು ಸೋಜಿಗವೆನಿಸಿದೆ.

Leave a Reply

Your email address will not be published. Required fields are marked *