Posts Slider

Karnataka Voice

Latest Kannada News

ಪತ್ನಿಗೆ ‘ಕೊಕ್’, ಆಕೆಯ ತಂಗಿಯೊಂದಿಗೆ ‘ಭಾಗ್’… ಕಾಮನಬಿಲ್ಲಿನ ‘ಸಾಥ್’… ಬಣ್ಣ ಎಣಿಸ್ತಾರಾ ಪೊಲೀಸ್ ‘ಕಮೀಷನರ್’…!!!?

1 min read
Spread the love

ಸೋ ಕಾಲ್ಡ್ ಇನ್ಸ್‌ಪೆಕ್ಟರ್, ಪೋಷಕರನ್ನು ಮತ್ತು ಹಿರಿಯರನ್ನು ಕರೆದು ಆರೋಪಿಗಳ ಮುಂದೆ ಕೆಟ್ಟ ಪದಗಳಿಂದ ಬೆದರಿಸಿ ನೀವೇ ಪರಿಹರಿಸಿಕೊಳ್ಳಿ ಎಂದು ಹೇಳಿ ಕಳುಹಿಸುತ್ತಾರೆ. ಆರೋಪಿಗಳು ಹಿರಿಯರ ನಿರ್ಧಾರವನ್ನು ಒಪ್ಪಲಿಲ್ಲ, ಆದ್ದರಿಂದ ಪ್ರಕರಣವನ್ನು ಠಾಣೆಗೆ ತೆಗೆದುಕೊಂಡು ಎಫ್ಐಆರ್ ಮಾಡಲಾಗಿದೆ. ಆರೋಪಿಯನ್ನು ಬಂಧಿಸುವ ಬದಲು ಇನ್ಸ್‌ಪೆಕ್ಟರ್, ಆರೋಪಿಗೆ ವಿಐಪಿ ಟ್ರೀಟ್ ನೀಡಿದ್ದಾರೆ

ಹುಬ್ಬಳ್ಳಿ: ಮಾನವೀಯತೆ ಮರೆತ ಜನರಿಗೆ ಪಾಠ ಕಲಿಸುವಂತೆ ಬೇಡಿಕೊಂಡು ಹೋಗುವ ಸ್ಥಳವೇ ಪೊಲೀಸ್ ಠಾಣೆ. ಅಲ್ಲಿ ಕೂತಿರುವ ಸ್ಟಾರ್‌ ಹೊತ್ತವರು ಬೇರೆಯದೇ ದಂಧೆಗೆ ಇಳಿದರೇ ಹೇಗೆ. ಮಾನವಂತರ ಬದಲಾಗಿ ಮಾನಗೆಟ್ಟವರಿಗೆ ಸಾಥ್ ಕೊಟ್ಟರೇ, ಸಾಮಾನ್ಯ ಜನರ ಪಾಡೇನು ಎಂಬ ಪ್ರಶ್ನೆ ಮೂಡುವಂತಹ ಘಟನೆಯೊಂದು ಹುಬ್ಬಳ್ಳಿ ನಗರದಲ್ಲಿ ನಡೆಯುತ್ತಿದೆ.

ನಗರದ ಆಸಾಮಿಯೋರ್ವ ತನ್ನ ಮಡದಿಯನ್ನ ಬಿಟ್ಟು ಆಕೆಯ ತಂಗಿಯನ್ನೇ ಓಡಿಸಿಕೊಂಡು ಮರೆಯಾದಾಗ, ಮನೆಯವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ಆಗಲೂ ಐದು ಸಾವಿರ ಪಡೆದು ಕಳಿಸಿದ್ದ ಮಹಾನುಭಾವ ‘ಕಾಮನಬಿಲ್ಲು’.

ತತದನಂತರ ನಡೆಯುತ್ತಿರುವುದು ಅಸಹ್ಯ ಹುಟ್ಟಿಸುವಂತಿದೆ. ಪ್ರಕರಣದ ಆರೋಪಿಯನ್ನ ರಾಜಾರೋಷವಾಗಿ ತಿರುಗಲು ಬಿಟ್ಟು, ದೂರು ನೀಡಿದವರನ್ನೇ ಹೀಯಾಳಿಸಲು ಮುಂದಾಗಿ ತಮ್ಮ ಬಣ್ಣಗಳೆಷ್ಟು ಎಂಬುದನ್ನ ಕಾಮನಬಿಲ್ಲು ತೋರಿಸುತ್ತಿದೆ.

ಹಣಕ್ಕಾಗಿ ಸಂಬಂಧಗಳನ್ನ ಬೀದಿಯಲ್ಲಿ ಮಾರಾಟ ಮಾಡಿಸಲು ಮುಂದಾಗುವ “ತ್ರಿ ಸ್ಟಾರ್ ಕಾಮನಬಿಲ್ಲು”, ತಮ್ಮ ಕುಟುಂಬದಲ್ಲಿ ಇಂತಹ ಘಟನೆ ನಡೆದರೂ ಹೀಗೆ ಮಾಡ್ತಾರಾ ಎಂಬ ಪ್ರಶ್ನೆ ಮೂಡುತ್ತಿದೆ.

161 ಕಾಮನಬಿಲ್ಲಿನಲ್ಲಿರುವ ಬಣ್ಣಗಳನ್ನ ದಕ್ಷ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಎಣಿಸಿ, ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕಿದೆ.


Spread the love

Leave a Reply

Your email address will not be published. Required fields are marked *