ಹುಬ್ಬಳ್ಳಿಯಲ್ಲಿ “ಅಭಿಷೇಕ್ ಜಾಧವ ಟೀಂ” ಅಂದರ್: ಮಾಡಿದ ಗೂಂಡಾಗಿರಿ ಎಂತಹದ್ದು ಗೊತ್ತಾ… Exclusive

ಹುಬ್ಬಳ್ಳಿಯಲ್ಲಿ ಮತ್ತೇ ಪುಡಿರೌಡಿಗಳ ಹಾವಳಿ; ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ.
ಹುಬ್ಬಳ್ಳಿ: ನಗರದಲ್ಲಿ ಮತ್ತೇ ಪುಡಿರೌಡಿಗಳ ಹಾವಳಿ ವಿಪರೀತವಾಗಿದ್ದು, ಕ್ಷುಲ್ಲಕ ವಿಚಾರಕ್ಕೇ ಯುವಕನೊಬ್ಬನ ಮೇಲೆ ನಡು ರಸ್ತೆಯಲ್ಲಿಯೇ ಚಾಕು ಹಾಗೂ ಬಾಟಲಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿಯಲ್ಲಿ ನಿನ್ನೇ ತಡರಾತ್ರಿ ಸಂಭವಿಸಿದೆ.
ಕಿಮ್ಸ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ಯುವಕನ ಹೆಸರು ಯಶವಂತ ಭಂಡಾರಿ. ಇಂದಿರಾ ನಗರ ನಿವಾಸಿ ನಿನ್ನೇ ರಾತ್ರಿ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿಯಲ್ಲಿನ ಹೋಟೆಲ್ ನಲ್ಲಿ ಬಿರಿಯಾನಿ ತೆಗೆದುಕೊಂಡು ಹೋಗಲು ಬಂದಾಗ.
ಸೆಟ್ಲಿಮೆಂಟ್ ನ ಅಭಿಷೇಕ್ ಜಾಧವ ಕೂಡಾ ಬಿರಿಯಾನಿ ಒಯ್ಯಲು ಹೋಟೆಲ್ ಗೆ ಬಂದಿದ್ದಾನೆ ಆಗ ಇಬ್ಬರು ಪರಸ್ಪರ ಗುರಾಯಿಸಿ ನೋಡಿದ್ದಾರೆ,ಆಗ ಅಭಿಷೇಕ ಜಾದವ ಕೂಡಲೇ ತನ್ನ ಜೊತೆ ಇದ್ದ ಹತ್ತಕ್ಕೂ ಹೆಚ್ಚು ಸಹಚರರ ಜೊತೆ ಸೇರಿ ಯಶವಂತ ಬಂಡಾರಿ ಮೇಲೆ ಚಾಕು ಹಾಗೂ ಬಾಟಲಿಗಳಿಂದ ಹಲ್ಲೆ ಮಾಡಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯಶವಂತ ನನ್ನು ಆತನ ಸಹೋದರರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ, ಅಷ್ಟೇ ಅಲ್ಲದೆ ಘಟನೆಯ ಕುರಿತು ಮಾಧ್ಯಮಕ್ಕೆ ಹಲ್ಲೆಗೊಳಗಾದ ಯಶವಂತ ಬಂಡಾರಿ ಕೂಡಾ ಘಟನೆಯ ಕುರಿತು ಪ್ರತಿಕ್ರಿಯೆ ಕೂಡಾ ನೀಡಿದ್ದಾನೆ.
ಹೊಡೆದಾಟದ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕಸಬಾಪೇಟ ಠಾಣೆಯ ಪೊಲೀಸರು ಭೇಟಿಯನ್ನು ನೀಡಿ ಹಲ್ಲೆ ನಡೆಸಿದ ಅಭಿಷೇಕ ಜಾಧವ್ ಸೇರಿ 12 ಜನ ಆರೋಪಿಗಳನ್ನು ಬಂಧನ ಮಾಡಿದ್ದು, ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಲದೇ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರದಲ್ಲಿ ದಿನದಿಂದ ದಿನಕ್ಕೆ ಪುಡಿ ರೌಡಿಗಳ ಹಾವಳಿ ವಿಪರೀತವಾಗಿದ್ದು,ಇಂಥವರ ಮೇಲೆ ಖಡಕ್ ಅಧಿಕಾರಿಯಾಗಿರುವ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಯಾವ ಕ್ರಮವನ್ನು ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.