Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಹೃದಯ ವಿದ್ರಾವಕ ಘಟನೆ: ರಸ್ತೆಯಲ್ಲಿ ಮೈದುನ, ಕಿಮ್ಸನಲ್ಲಿ ಅತ್ತಿಗೆ ಕೊನೆಯುಸಿರು…!!!

Spread the love

ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತಿಗೆಯನ್ನ ಸಂಬಂಧಿಕರ ಜೊತೆ ಆಟೋದಲ್ಲಿ ಕಳಿಸಿ, ಬೈಕಿನಲ್ಲಿ ಹೋಗುತ್ತಿದ್ದ ಮೈದುನ, ಇಬ್ಬರು ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿಯ ಬೀರಬಂದ ಓಣಿಯ ಹನಿಬಾಬಿ ಎಂಬುವರಿಗೆ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿದೆ. ತಕ್ಷಣವೇ ಅವರನ್ನ ಕಿಮ್ಸ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಅಲ್ಲಿಗೆ ಹೋಗುವುದರಲ್ಲಿ ಚಿಕಿತ್ಸೆ ಸ್ಪಂದಿಸುವ ಮುನ್ನವೇ ಸಾವಿಗೀಡಾಗಿದ್ದಾರೆ.

ಕಿಮ್ಸನಲ್ಲಿ ಈ ಘಟನೆ ನಡೆಯುತ್ತಿದ್ದಾಗಲೇ ಹುಬ್ಬಳ್ಳಿಯ ಹೊಸೂರ ಸರ್ಕಲ್ ಬಳಿ ಬೈಕಿನಲ್ಲಿ ಬರುತ್ತಿದ್ದ ಹನಿಬಾಬಿಯ ಮೈದುನ ಪೈರೋಜ ಧಾರವಾಡ, ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

ಬೀರಬಂದ ಓಣಿಯಲ್ಲಿ ಘಟನೆಯ ಮಾಹಿತಿ ಗೊತ್ತಾಗುತ್ತಿದ್ದ ಹಾಗೇ ಸಂಬಂಧಿಕರು, ಸ್ಥಳೀಯರು ಕಿಮ್ಸಗೆ ದೌಡಾಯಿದ್ದಾರೆ.


Spread the love

Leave a Reply

Your email address will not be published. Required fields are marked *