ಕ್ಯಾರಕೊಪ್ಪದಲ್ಲಿ ದುರಂತ “ತಂದೆ-ಮಗ”ನ ದುರ್ಮರಣ…

ಧಾರವಾಡ: ವಾಹನವನ್ನ ತೊಳೆಯಲು ಕೆರೆಗೆ ಹೋದ ತಂದೆ ಹಾಗೂ ಹತ್ತು ವರ್ಷದ ಮಗು ಆಯತಪ್ಪಿ ಬಿದ್ದು ಸಾವಿಗೀಡಾದ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.
ಘಟನೆ ನಡೆದ ಕೆಲವೇ ನಿಮಿಷಗಳ ನಂತರದ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…
ಕ್ಯಾರಕೊಪ್ಪ ಗ್ರಾಮದ ಗದಿಗೆಪ್ಪ ಅಗಸಿಮನಿ ಹಾಗೂ ಇವರ ಹತ್ತು ವರ್ಷದ ಮಗು ರವಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಘಟನೆ ನಡೆಯುತ್ತಿದ್ದ ಹಾಗೇ, ಸಂಬಂಧಿಕರು ಕಣ್ಣೀರು ಹಾಕುತ್ತಿದ್ದರು.
ಘಟನೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.