ಕುಂದಗೋಳಕ್ಕೆ ಗುಳ್ಳಾರಿ, ನವಲಗುಂದಕ್ಕೆ ದೃವರಾಜ್ ಪಾಟೀಲ ವರ್ಗಾವಣೆ… 92 ಇನ್ಸಪೆಕ್ಟರುಗಳ ವರ್ಗಾಯಿಸಿ ಆದೇಶ…

ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದ್ದು, 92 ಇನ್ಸಪೆಕ್ಟರುಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ನವಲಗುಂದ ವೃತ್ತದ ಪೊಲೀಸ್ ಇನ್ಸಪೆಕ್ಟರ್ ಆಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದ ಚಂದ್ರಶೇಖರ ಮಠಪತಿಯವರನ್ನ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಳಕ್ಕೆ ವಿಜಯಪುರ ರೇಲ್ಪೆ ಪೊಲೀಸ್ ಠಾಣೆಯ ದೃವರಾಜ್ ಪಾಟೀಲರನ್ನ ವರ್ಗಾಯಿಸಲಾಗಿದೆ.
ಕೊಪ್ಪಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾರುತಿ ಗುಳ್ಳಾರಿ ಅವರನ್ನ ಕುಂದಗೋಳಕ್ಕೆ ವರ್ಗಾಯಿಸಲಾಗಿದೆ.