ಕಲಘಟಗಿ ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜನ ಆಟಾಟೋಪ… ದೂರು ನೀಡಿದ್ರು ಕ್ರಮವಿಲ್ಲ…!

ಕಲಘಟಗಿ: ತಾಲೂಕಿನ ಭಾರತೀಯ ಜನತಾ ಪಕ್ಷದ ಮುಖಂಡರಿಗೆ ಅದೇನಾಗಿದೇಯೋ ಏನೋ.. ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ಮುಖಂಡನೋರ್ವ ಮಹಿಳೆಯೊಂದಿಗೆ ಅಸಭ್ಯವಾಗಿ ವಾಟ್ಸಾಫ್ ನಲ್ಲಿ ಮಾತನಾಡಿದ ವೀಡಿಯೋ ಹೊರಬಿದ್ದ ಘಟನೆ ಮರೆಮಾಚುವ ಮುನ್ನವೇ ಬಿಜೆಪಿಯ ತಾಲೂಕು ಅಧ್ಯಕ್ಷನೇ ಹೊಡೆದಾಡಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಶಿವಾನಂದ ಕಲ್ಲಪ್ಪ ಕಲಘಟಗಿ ಎಂಬುವವರನ್ನ ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಶೆರೆವಾಡ ಹೊಡೆಯುತ್ತಿದ್ದಾಗ, ಬಿಡಿಸಿಕೊಳ್ಳಲು ಹೋದ ಮಂಜಪ್ಪ ಕುಂದಗೋಳ ಎಂಬುವರನ್ನ ಬಸವರಾಜ ಹೊಡೆದಿದ್ದಾರೆ ಎಂದು ದೂರು ನೀಡಲಾಗಿದೆ.

ಶಾಸಕ ಸಿ.ಎಂ.ನಿಂಬಣ್ಣನವರ ಅವರೇ ಈ ಪ್ರಕರಣವನ್ನ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ತಾಲೂಕಿನ ಅಧ್ಯಕ್ಷ ಬಸವರಾಜನ ಆಟಾಟೋಪವನ್ನ ಬಯಲಿಗೆ ಹಾಕಿ, ಕಾನೂನಿನ ಕ್ರಮವನ್ನ ಜರುಗಿಸುವ ಅವಶ್ಯಕತೆ ಇದೆ ಎನ್ನುವುದು ಎಲ್ಲರ ಮಾತಾಗಿದೆ.