ಹು-ಧಾ ಮೇಯರ್ ಗೆ ಅವಮಾನ: ತಿಪ್ಪಣ್ಣ ಮಜ್ಜಗಿ ಕೆಂಡಾಮಂಡಲ… ಸಾಥ್ ನೀಡಿದ್ದು ಯಾರು ಗೊತ್ತಾ…!?

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಹಾಪೌರ ವೀರೇಶ ಅಂಚಟಗೇರಿಯವರಿಗೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವಮಾನ ಮಾಡುವುದಕ್ಕೆ ಮುಂದಾಗಿದ್ದಾರೆಂದು ದೂರಿ, ಪಾಲಿಕೆಯ ಆಯುಕ್ತರು ಕೆಂಡಾಮಂಡಲರಾದ ಘಟನೆ ನಡೆದಿದೆ.
ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯ ಸಮಯದಲ್ಲಿ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಮೇಯರ್ ವೀರೇಶ ಅಂಚಟಗೇರಿ ಅವರನ್ನ ಕೆಳಗೆ ಹೋಗುವಂತೆ ತಿಳಿಸಿದಾಗ ಸಭಾಂಗಣ, ಆಕ್ರೋಶವ್ಯಕ್ತಪಡಿಸಿತು.
ವೀಡಿಯೋ ಇಲ್ಲಿದೆ ನೋಡಿ…
ಅಧಿಕಾರಿಯ ನಡೆಯನ್ನ ಮೊದಲು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದು ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿಯವರು. ಅವರಿಗೆ ವೀರಣ್ಣ ಸವಡಿ, ಸಂತೋಷ ಚವ್ಹಾಣ ಸಾಥ್ ನೀಡುತ್ತಿದ್ದ ಹಾಗೇ, ಕನ್ನಡ ಸರಿಯಾಗಿ ಬಾರದಿದ್ದರೂ ಅಧಿಕಾರಿಯ ನಡೆಯನ್ನ ಕಾಂಗ್ರೆಸ್ ಸಭಾನಾಯಕ ದೊರ್ರಾಜ್ ಖಂಡಿಸಿದರು.