ಐಎಎಸ್ ಟಾಪರ್ “ಕಾರ್ಪೋರೇಷನ್ ಕಮೀಷನರ್”- ಟಗರಾಗಿ ಗುಮ್ಮಿದ್ದು ಹೇಗೆ ಗೊತ್ತಾ…!!!

ಧಾರವಾಡ: ಓರ್ವ ಅಧಿಕಾರಿ ತಾನು ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದಕೊಂಡು ಹೋಗುವುದರ ಜೊತೆಗೆ ನಾನೂ ನಿಮ್ಮೊಳಗೊಬ್ಬ ಎಂಬುದನ್ನ ಬಿಂಬಿಸುತ್ತ ಹೋದರೇ, ಅದು ಸರಕಾರಿ ಕೆಲಸದಲ್ಲಿ ಸಾಕಷ್ಟು ಬದಲಾವಣೆ ತರಲು ಸಾಧ್ಯ ಎಂದು ಹೇಳಲಾಗತ್ತೆ. ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ.
ಈ ವೀಡಿಯೋವನ್ನ ಮೊದಲು ನೋಡಿಬಿಡಿ…
ಹೀಗೆ ಶಿವರಾಜಕುಮಾರ ನಟನೆಯ ಹಾಡಿಗೆ ಟಗರಾಗಿ ಕುಣಿದಿದ್ದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಕೆ.ಗೋಪಾಲಕೃಷ್ಣ. ಐಎಎಸ್ ಟಾಪರ್.
ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮಹಾನಗರ ಪಾಲಿಕೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮ ಇನ್ನುಳಿದ ಸಿಬ್ಬಂದಿಗಳ ಜೊತೆಗೆ ಕುಣಿದಿದ್ದು, ಪ್ರತಿಯೊಬ್ಬರಲ್ಲೂ ಪುಳಕ ಮೂಡಿಸಿತ್ತು.