ಧಾರವಾಡದ ನಾಲ್ಕು ದಿಕ್ಕಿಗೆ ನಾಲ್ಕು ಅಪಘಾತ: ಐವರು ಸಾವು, ಐವರು ಬಚಾವ್…!

ಧಾರವಾಡ: ನಗರದ ನಾಲ್ಕು ಪ್ರದೇಶಗಳಲ್ಲಿ ನಡೆದ ನಾಲ್ಕು ಅಪಘಾತಗಳಲ್ಲಿ ಐವರು ಸಾವನ್ನಪ್ಪಿ, ಐವರು ಅದೃಷ್ಟವಶಾತ್ ಬದುಕುಳಿದ ಘಟನೆ ನಡೆದಿದ್ದು, ಸೋಜಿಗಪಡುವಂತಾಗಿದೆ.

ತೇಗೂರ ಕ್ರಾಸ್ ಬಳಿ ನಡೆದ ಲಾರಿ- ಬೈಕ್ ಡಿಕ್ಕಿಯಲ್ಲಿ ಮಾರ್ಕೋಪೋಲೊ ಕಂಪನಿಯ ಸೆಕ್ಯುರಿಟಿ ಗಾರ್ಡಗಳಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಸಿದ್ದಪ್ಪ ಕಲ್ಲೇದ ಹಾಗೂ ಕಲ್ಲಪ್ಪ ಎನ್ನುವವರು ಸಾವಿಗೀಡಾಗಿದ್ದಾರೆ.
ಧಾರವಾಡದ ಅಮ್ಮಿನಬಾವಿಯ ರಸ್ತೆಯಲ್ಲಿ ಬೈಕ್ ಸ್ಕೀಡ್ ಆದ ಪರಿಣಾಮ ಕಬ್ಬೇನೂರಿನ 26 ವರ್ಷದ ರಾಜು ಕುಲಕರ್ಣಿ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ.

ಧಾರವಾಡದ ಉಪನಗರ ಪೊಲೀಸ್ ಠಾಣೆಯ ಸಮೀಪದಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಸೈದಾಪೂರದ ಮಜೀನ್ ಅಮ್ಮಜ್ಜನವರ ಹಾಗೂ ಜನ್ನತನಗರದ ಫರ್ಹಾನ್ ಸಂಗ್ರೇಶಕೊಪ್ಪ ಡಿವೈಡರ್ ಗೆ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ.

ಬೆಳಗಿನ ಜಾವ ಯರಿಕೊಪ್ಪದ ಬಳಿ ವಿಜಯಪುರದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೇರಿದಂತೆ ಕುಟುಂಬದ ಐವರಿದ್ದ ಕಾರು ಪಲ್ಟಿಯಾಗಿದ್ದು, ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಲ್ಕು ಘಟನೆಗಳ ಬಗ್ಗೆ ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.