“ದೋ ಸಾಲ್ ಬಾದ್” ಹೋಳಿಯಾಡಿದ ಧಾರವಾಡ ಡಿಸಿ ನಿತೇಶ ಪಾಟೀಲ- ಸೌಹಾರ್ಧತೆಯಿಂದ ಹಬ್ಬ ಆಚರಿಸಿ ಅಂದ್ರು…

ಧಾರವಾಡ: ಕೊರೋನಾ ಪ್ರಕರಣಗಳು ಸಾರ್ವಜನಿಕರ ನೆಮ್ಮದಿಯನ್ನ ಕೆಡಿಸಿದ್ದರೇ, ಅಧಿಕಾರಿಗಳು ಹಗಲಿರುಳು ದುಡಿಯುವಂತೆ ಮಾಡಿತ್ತು. ಆದರೆ, ಅದರ ಕರಿನೆರಳು ಹೋದ ನಂತರ ಜಿಲ್ಲಾಧಿಕಾರಿಯೂ ಖುಷಿಯಿಂದ ಹೋಳಿ ಹಬ್ಬವನ್ನ ಆಚರಿಸುವಂತೆ ಆಗಿದೆ.
ನಗರದಲ್ಲಿಂದು ವಿವಿಧ ಇಲಾಖೆಯ ಸರಕಾರಿ ನೌಕರರು ಹಾಗೂ ಸ್ವಯಂ ಸೇವಾ ಸಂಘಗಳ ಜೊತೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಹೋಳಿಯನ್ನ ಸೌಹಾರ್ಧತೆಯಿಂದ ಆಚರಿಸಬೇಕೆಂದು ಕರೆ ನೀಡಿದರು.
ಪೂರ್ಣ ವೀಡಿಯೋ ಇಲ್ಲಿದೆ ನೋಡಿ..
ಹೋಳಿ ಹಬ್ಬವೂ ಬದುಕಿನಲ್ಲಿ ಬಣ್ಣವನ್ನ ಓಕುಳಿಯಂತಾಡಿ ಮುಗಿಸುವುದೇ ಆಗಿದೆ. ಕೊರೋನಾದಂತಹ ಕರಿ ಬಣ್ಣವೂ ಮನುಷ್ಯನ ಜೀವನದಿಂದ ದೂರ ಹೋಗಿ, ಬದುಕನ್ನ ಮತ್ತಷ್ಟು ಬಣ್ಣವಾಗಿಸುವಂತಾಗಲಿ ಎನ್ನುವುದೇ ಎಲ್ಲರ ಬಯಕೆಯಾಗಿದೆ.