“ಸಣ್ಣವರ ಬಲಿ ಒಳ್ಳೆಯದಲ್ಲ”- ಸತಾರೆ ಅಮಾನತ್ತು ಬಗ್ಗೆ ಡಿಜಿ ಜೊತೆ ಮಾತಾಡ್ತೇನಿ: ಸಭಾಪತಿ ಬಸವರಾಜ ಹೊರಟ್ಟಿ..
1 min readಧಾರವಾಡ: ತಮ್ಮ ಮೇಲೆ ಪ್ರಕರಣ ದಾಖಲು ಮಾಡಿರುವ ಬಗ್ಗೆ ಸಣ್ಣವರನ್ನ ಬಲಿ ಕೊಡುವುದಲ್ಲ. ನಿಜವಾಗಿಯೂ ಯಾರೂ ಕಾರಣರು ಅವರಿಗೆ ಶಿಕ್ಷೆ ಆಗಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇನ್ಸಪೆಕ್ಟರ್ ಶ್ರೀಧರ ಸತಾರೆ ಅವರನ್ನ ಅಮಾನತ್ತು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಯವರ ಜೊತೆ ಮಾತನಾಡುವುದಾಗಿ ಹೊರಟ್ಟಿ ಹೇಳಿದರು.
ಕೊರೋನಾ ಪಾಸಿಟಿವ್ ಆಗಿದ್ದ ಇನ್ಸಪೆಕ್ಟರ್ ಅವರನ್ನ ಕರೆಯಿಸಿ ಎಫ್ಐಆರ್ ದಾಖಲು ಮಾಡಿಕೊಳ್ಳಲು ಹಿರಿಯ ಅಧಿಕಾರಿಗಳು ಹೇಳಿದ್ದರೆನ್ನುವುದನ್ನ ಇಲ್ಲಿ ಸ್ಮರಿಸಬಹುದಾಗಿದೆ.